ಅಮೃತಪುರಿ, ನವೆಂಬರ್ 10, 2010

ನಮ್ಮ ದೇಶದ ಸಾರ್ವಜನಿಕ ಸ್ಥಳಗಳನ್ನು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಶುಚಿಗೊಳಿಸುವ ಗುರಿ ಹೊಂದಿರುವ ಈ ಯೋಜನೆ, ಸ್ವಚ್ಛತೆಯ ಮೂಲಕ ನಮ್ಮ ಸುಂದರ ನಿಸರ್ಗ ಹಾಗೂ ಭೂಮಿಯ ಕುರಿತಾದ ಮಾನವತೆಯ ಋಣದ ಬಗ್ಗೆ ಸಾಮಾಜಿಕ ಅರಿವನ್ನು ಮೂಡಿಸುವ ಅಭಿಲಾಷೆಯನ್ನು ಹೊಂದಿದೆ. ಸೆಪ್ಟಂಬರ್ 27, 2010ರಂದಿನ ತನ್ನ 57ನೆಯ ಜನ್ಮ ದಿನೋತ್ಸವದಂದು, ಅಮ್ಮ ಈ ಯೋಜನೆಯನ್ನುಜಾರಿಗೆ ತಂದರು. ಇದು ಅಮ್ಮನ ಜನ್ಮ ದಿನೋತ್ಸವದ ಆಶಯವೂ ಆಗಿದೆ. ಮಾತಾ ಅಮೃತಾನಂದಮಯಿ ಮಠ (ಮಾ.ಅ.ಮ.)ವು ರಾಜ್ಯ ಸರಕಾರಗಳ ಹಾಗೂ ಇನ್ನಿತರ ಸಂಸ್ಥೆಗಳ ಬೆಂಬಲ ಹಾಗೂ ಸಹಕಾರ ಸಿಕ್ಕಿದಲ್ಲಿ ಸರಕಾರಿ ಶಾಲೆಗಳಲ್ಲಿ ಹಾಗೂ ಭಾರತದಾದ್ಯಂತ ರಸ್ತೆಗಳ ಬದಿಯಲ್ಲಿ ಶೌಚಾಲಯ ಕಟ್ಟಿಸುವ ಹಾಗೂ ಕಸದ ಪೆಟ್ಟಿಗೆ ಸ್ಥಾಪಿಸುವ ಜವಾಬ್ದಾರಿಯನ್ನು ವಹಿಸುವುದೆಂದು ಅಮ್ಮ ಹೇಳಿದ್ದಾರೆ.

ನಾವು ನಮ್ಮ ಪರಿಸರವನ್ನು ಸ್ವಚ್ಛವಾಗಿಡುತ್ತೇವೆಂಬ ಪಣತೊಡಬೇಕೆಂದು ಅಮ್ಮ ಬಯಸುತ್ತಾರೆ. ಜನತೆ, ಸರಕಾರ ಹಾಗೂ ಇನ್ನಿತರ ಸಂಸ್ಥೆಗಳು ಒಟ್ಟುಗೂಡಿದರೆ ನಿಶ್ಚಯವಾಗಿಯೂ ಈ ಪವಿತ್ರ ಪರಿಶ್ರಮವು ಫಲವೀಯುವುದೆಂದು ಅಮ್ಮ ಭಾವಿಸುತ್ತಾರೆ.

ಈ ಯೋಜನೆಯು ಮೊದಲು ಕೇರಳದಲ್ಲಿ ಆರಂಭವಾಗಿ ತದನಂತರ ಭಾರತದ ಇನ್ನಿತರ ರಾಜ್ಯಗಳಿಗೂ ಹರಡುತ್ತದೆ. ವಿಭಿನ್ನ ಸ್ಥಳಗಳ ಶುಚೀಕರಣದ ವರದಿ ಮತ್ತು ಫೋಟೊಗಳಿಗೆ ಸಂದರ್ಶಿಸಿರಿ: http://e.amritapuri.org/abc/ka-about
http://e.amritapuri.org/abc/ka-about/ka-says