ದೇವರಪೂಜೆಗಾಗಿ ಉಪಯೋಗಿಸುವ ಎಲ್ಲ ವಸ್ತುಗಳೂ ಅತ್ಯುತ್ತಮವಾಗಿರಬೇಕೆಂದು ನಾವು ಎಚ್ಚರಿಕೆ ವಹಿಸುತ್ತೇವೆ. ಕೊಳೆತ ಹಣ್ಣುಗಳಾಗಲೀ, ಬಾಡಿದ ಹೂವುಗಳಾಗಲೀ, ಅಸ್ವಚ್ಛ ಪಾತ್ರೆಗಳಾಗಲೀ, ಯಾವುದನ್ನೂ ನಾವು ದೇವರಪೂಜೆಗೆ ಎಂದಿಗೂ ಉಪಯೋಗಿಸುವುದಿಲ್ಲ. ನಾವು ಎಷ್ಟೇ ಜಾಗರೂಕತೆಯಿಂದ ರಸ್ತೆ ದಾಟಲು ಪ್ರಯತ್ನಿಸಿದರೂ, ಇತರ ವಾಹನ ಚಾಲಕರ ಅಜಾಗರೂಕತೆಯಿಂದ ನಮಗೆ ಅಪಘಾತ ಸಂಭವಿಸಬಹುದು. ‘ಕರ್ಮಫಲವನ್ನು ನಿಯಂತ್ರಿಸುವ ಎಲ್ಲಾ ಅಂಶಗಳೂ ನಮಗೆ ಅನುಕೂಲಕರವಾಗಿರಲು ಧೈವಕೃಪೆ ಇದ್ದೇ ತೀರಬೇಕು’, ಎಂದು ಹೇಳುವುದು ಈ ಕಾರಣದಿಂದಲೇ. ಅದಕ್ಕೆ ಸುಲಭವಾದ ಮಾರ್ಗವೆಂದರೆ, ಎಲ್ಲಾ ಕರ್ಮಗಳನ್ನೂ ದೇವರಪೂಜೆಯಾಗಿ ಮಾಡುವುದೇ ಆಗಿದೆ. ಪ್ರತಿಯೊಂದು ಕರ್ಮವನ್ನೂ […]
Category / ವಾರ್ತೆ
ದೇವರೆಂದರೆ ಪ್ರೇಮ. ದೇವರು ಈ ಸೃಷ್ಟಿಯ ಹಿಂದಿರುವ ಚೈತನ್ಯವಾಗಿದ್ದಾನೆ. ಎಲ್ಲಾ ಜೀವಜಂತುಗಳ ಬಗ್ಗೆ ಪ್ರೇಮ ಮತ್ತು ಕರುಣೆಗೆ ಪ್ರಾಧಾನ್ಯ ನೀಡದ ಧರ್ಮ ಯಾವುದೂ ಇಲ್ಲ. ಎಲ್ಲಾ ಮತದವರೂ ಪ್ರೇಮಪೂರ್ಣರಾಗಿ ವರ್ತಿಸಿದ್ದರೆ, ಲೋಕದಲ್ಲಿ ಕಾಣುವ ಸಮಸ್ಯೆಗಳೆಲ್ಲವೂ ಬಹಳ ಹಿಂದೆಯೇ ಇಲ್ಲವಾಗುತ್ತಿದ್ದವು. ಎಲ್ಲಾ ಜೀವರಾಶಿಗಳೂ ಭಗವಂತನ ಮಕ್ಕಳು. ಅವರು ಪರಸ್ಪರ ಪ್ರೀತಿಸಬೇಕು ಮತ್ತು ಸೋದರ ಭಾವದಿಂದ ಸಹಕರಿಸಬೇಕೆಂದು ಭಗವಂತ ಬಯಸುತ್ತಾನೆ. ಆದರೆ, ತಾನೇ ಸೃಷ್ಟಿಸಿಕೊಂಡ ಭಿನ್ನತೆಗಳ ಕಾರಣದಿಂದ ಮನುಷ್ಯನು ಆತ್ಮವಿನಾಶದ ಕಡೆಗೆ ಸಾಗುತ್ತಿದ್ದಾನೆ. ಮಾನವ ಸಮೂಹಕ್ಕೆ ಪ್ರೀತಿ ಮತ್ತು ಸತ್ಯದ […]
ಮಕ್ಕಳೇ, ಜೀವನದಲ್ಲಿ ಎರಡು ಕಾರ್ಯಗಳು ನಡೆಯುತ್ತವೆ. ಒಂದು, ಕರ್ಮ ಮಾಡುವುದು. ಎರಡು, ಅದರ ಫಲವನ್ನು ಅನುಭವಿಸುವುದು. ಕರ್ಮವನ್ನು ಯಾವ ಮನೋಭಾವದೊಂದಿಗೆ ಮಾಡಬೇಕು ಮತ್ತು ಕರ್ಮಫಲವನ್ನು ಯಾವ ಮನೋಭಾವದೊಂದಿಗೆ ಅನುಭವಿಸಬೇಕು ಎಂಬುದನ್ನು ತಿಳಿದರೆ, ಜೀವನವು ತುಲನಾತ್ಮಕವಾಗಿ ಶಾಂತವಾಗಿಯೂ ಮತ್ತು ಸಮಾಧಾನಪೂರ್ಣವಾಗಿಯೂ ಇರುತ್ತದೆ. ನಾವು ಬಹಳಷ್ಟು ನಿರೀಕ್ಷಿಸುವ ಕಾರ್ಯಗಳು ಸಂಭವಿಸದೇ ಇರುವುದೂ ಮತ್ತು ನಿರೀಕ್ಷಿಸದ ಕಾರ್ಯಗಳು ಸಂಭವಿಸುವುದೂ, ಜೀವನದಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಷಯ. ಒಂದು ಕರ್ಮದ ಫಲವು ದೊರಕಲು ನಮ್ಮ ಕರ್ಮದ ಜೊತೆಗೆ ಅನೇಕ ಅಂಶಗಳೂ ಕಾರಣವಾಗಿರುತ್ತವೆ. ಇವೆಲ್ಲವೂ ಅನುಕೂಲಕರವಾಗಿ […]
ಮನಸ್ಸಿನ ನಿರಂತರ ಚಲನೆಯು ಆಲೋಚನೆಗಳ ಅನಂತ ಅಲೆಗಳನ್ನು ಸೃಷ್ಟಿಸುತ್ತದೆ. ಈ ಆಲೋಚನಾ ತರಂಗಗಳ ಕಾರಣದಿಂದ, ಎಲ್ಲದರ ಬಗ್ಗೆ ನಮ್ಮ ದೃಷ್ಟಿಕೋನವು ಅಸ್ಪಷ್ಟ ಮತ್ತು ಅಪೂರ್ಣವಾಗುತ್ತದೆ ಚಂಚಲವಾಗಿರುವುದು ಮಾನವ ಮನಸ್ಸಿನ ಸ್ವಭಾವವಾಗಿದೆ. ಗಡಿಯಾರದ ಲೋಲಕದಂತೆ ಅದು ಒಂದು ವಿಷಯದಿಂದ ಇನ್ನೊಂದಕ್ಕೆ ಸದಾ ಚಲಿಸುತ್ತಲೇ ಇರುತ್ತದೆ. ಈ ಚಲನೆಯು ಅಂತ್ಯವಿಲ್ಲದೆ ಮುಂದುವರಿಯುತ್ತಲೇ ಇರುತ್ತದೆ. ಒಂದು ಕ್ಷಣ ಮನಸ್ಸು ಏನನ್ನಾದರೂ ಇಷ್ಟಪಡುತ್ತದೆ; ಮರುಕ್ಷಣವೇ ಅದನ್ನು ದ್ವೇಷಿಸುತ್ತದೆ. ಒಂದು ವಸ್ತುವನ್ನು ಮನಸ್ಸು ಈಗ ಬಯಸುತ್ತದೆ, ಮರುಕ್ಷಣವೇ ಅದೇ ವಸ್ತುವಿನಲ್ಲಿ ಬೇಸರ ಮೂಡುತ್ತದೆ. ಮನಸ್ಸೆಂಬ […]
ದೇವಾಲಯ ಮತ್ತು ಮಸೀದಿಗಳಿಗೆ ಹೋಗಿ ಪೂಜೆ ಸಲ್ಲಿಸಿದ ಮಾತ್ರಕ್ಕೇ ಧರ್ಮಾಚರಣೆ ಆಯಿತೆಂದಲ್ಲ, ಅದು ಪರಿಪೂರ್ಣ ಭಕ್ತಿಯೆಂದೂ ಅರ್ಥವಲ್ಲ. ಎಲ್ಲ ಜೀವಜಾಲಗಳಲ್ಲೂ ಆತ್ಮನನ್ನು, ಭಗವಂತನನ್ನು ಕಾಣಲು ಸಾಧ್ಯವಾಗಬೇಕು. ಅದೇ ನಿಜವಾದ ಭಕ್ತಿ. ಎಲ್ಲಾ ಚರಾಚರಗಳನ್ನು ಸಂರಕ್ಷಿಸುವುದೇ ಪ್ರಕೃತಿಯ ಏಕೈಕ ಉದ್ದೇಶ. ಈ ವಿಷಯದಲ್ಲಿ ನಮಗೆ ಸಂಪೂರ್ಣ ನಂಬಿಕೆ ಇರಬೇಕು. ಏನನ್ನೂ ಹಾನಿ ಮಾಡದೆ ಬದುಕಲು, ಶಾಂತಿಯುತ ಮಾರ್ಗಗಳನ್ನು ನಾವು ಕಂಡುಕೊಳ್ಳಬೇಕು. ಸ್ವಂತ ಏಳಿಗೆಗಾಗಿ ಇತರರನ್ನು ನಾಶಪಡಿಸಲು ನಾವು ಮುಂದಾಗಬಾರದು. ಇದು 21ನೇ ಶತಮಾನ. ಈ ಮಹಾಧಾರ್ಮಿಕ ಸಮ್ಮೇಳನದ ಯಶಸ್ಸಿಗಾಗಿ […]

Download Amma App and stay connected to Amma