Category / ವಾರ್ತೆ

ಎಲ್ಲವೂ ನಮ್ಮ ಇಚ್ಛೆಗೆ ಅನುಗುಣವಾಗಿ ನಡೆಯುವುದಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ಹತ್ತು ಮೊಟ್ಟೆಗಳನ್ನು ಮರಿಗಳಾಗಲು ಇಟ್ಟರೆ, ಹತ್ತೂ ಮೊಟ್ಟೆಗಳು ಮರಿಗಳಾಗುವುದಿಲ್ಲ. ನಮ್ಮ ಇಚ್ಛೆಯಂತೆ ನಡೆದರೆ, ಆ ಎಲ್ಲಾ ಮೊಟ್ಟೆಗಳೂ  ಮರಿಗಳಾಗಬೇಕು. ಅದು ಸಾಧ್ಯವಿಲ್ಲ. ಆದ್ದರಿಂದ ಎಲ್ಲವನ್ನೂ ಅವನ ಇಚ್ಛೆಗೆ ಬಿಟ್ಟುಕೊಡುವ  ಶರಣಾಗತ ಮನೋಭಾವ ನಮ್ಮೊಳಗೆ ಬೆಳೆಯಬೇಕು. ಅದೇ ನಮ್ಮ ಜೀವನದ ಧ್ಯೇಯವಾಗಿರಬೇಕು. ಕೆಲವರು ಕೇಳಬಹುದು, “ನಿಮ್ಮ ಕೃಷ್ಣನು ‘ವೇತನ ಬಯಸದೆ ಕೆಲಸ ಮಾಡು’ ಎಂದು ಹೇಳುತ್ತಾನೆ ಅಲ್ಲವೇ?”  ಇದು ಎಂದಿಗೂ ಸರಿಯಲ್ಲ. ಕರ್ಮ ಮಾಡಿದಾಗ ನಾವು ನಿರೀಕ್ಷಿಸಿದಂತೆ ಫಲ […]

ಜೀವನದಲ್ಲಿ ಎರಡೇ ಸಂಗತಿಗಳಿವೆ – ಕರ್ಮ ಮಾಡುವುದು ಮತ್ತು ಫಲವನ್ನು ಅನುಭವಿಸುವುದು. ಅನೇಕರು ಹೇಳುವುದುಂಟು, ‘ಇದುವರೆಗೂ ನಾನು ತಿಳಿದೂ ತಿಳಿದೂ ಯಾವ ತಪ್ಪನ್ನೂ ಮಾಡಿಲ್ಲ, ಆದರೂ ಈ ಕಷ್ಟಗಳನ್ನೆಲ್ಲಾ ಅನುಭವಿಸಬೇಕಾಗಿದೆ’ ಎಂದು. ಒಂದು ವಿಷಯ ಖಂಡಿತ. ನಾವು ಮಾಡಿದ ಕರ್ಮದ ಫಲವನ್ನು ನಾವೇ ಅನುಭವಿಸಬೇಕು. ಅದರ ಫಲವನ್ನು  ತಪ್ಪಿಸಲು ಸಾಧ್ಯವೇ ಇಲ್ಲ. ಸಾವಿರಾರು ಹಸುಗಳ ನಡುವೆ ಒಂದು ಕರುವನ್ನು ಬಿಟ್ಟರೆ, ಅದು ಅದರ ತಾಯಿಯ ಬಳಿಗೇ ಹೋಗಿ ಸೇರುತ್ತದೆ. ಅದೇ ರೀತಿ ಪ್ರತಿಯೊಬ್ಬರೂ ಅವರವರ ಕರ್ಮಫಲವನ್ನು ಅವರೇ […]

ಕಳೆದ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ 40+ ಸಿಆರ್ ಪಿಎಫ್ ಯೋಧರ ಕುಟುಂಬಕ್ಕೆ ಮಾತಾ ಅಮೃತಾನಂದಮಯಿ ಮಠ ತಲಾ 5 ಲಕ್ಷ ರು. ಪರಿಹಾರ ಘೋಷಿಸಿದೆ. ದೇಶ ಹೆಮ್ಮೆಯ ಯೋಧರನ್ನು ಕಳೆದುಕೊಂಡಿದೆ. ಯೋಧರ ಕುಟುಂಬಕ್ಕೆ ಸಹಾಯ ಮಾಡುವುದು ನಮ್ಮ ಧರ್ಮ, ನಮ್ಮನ್ನು ಸುರಕ್ಷಿತವಾಗಿಡಲು ಅವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಸ್ಥರಿಗೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೊರೆಯಲಿ ಎಂದು ಶ್ರೀ ಮಾತಾ […]

ಪ್ರಶ್ನೆ: ತಪಸ್ಸಿನಿಂದ ಶಕ್ತಿ ಹೇಗೆ ಉಂಟಾಗುತ್ತದೆ ? “ಒಂಬತ್ತು ಕವಲುಗಳಿರುವ ಒಂದು ನದಿಯಿದೆ. ಅದರ ಪ್ರವಾಹಕ್ಕೆ ಬಲವಿಲ್ಲ. ಆದರೆ ಆ ಒಂಬತ್ತು ಕವಲುಗಳನ್ನು ಮುಚ್ಚಿ ನದಿಯಲ್ಲಿ ಮಾತ್ರ ನೀರು ಹರಿಯಲು ಬಿಟ್ಟರೆ, ಪ್ರವಾಹ ಶಕ್ತಿಶಾಲಿಯಾಗುತ್ತದೆ. ಆ ಶಕ್ತಿಯಿಂದಲೇ ಕರೆಂಟ್ ಉತ್ಪಾದಿಸುತ್ತಾರೆ. ಇದೇ ತರ ನಿಮ್ಮ ಆಲೋಚನೆಗಳನ್ನು, ಬಹುಮುಖವಾಗಿ ಹಾರುವ ಮನಸ್ಸನ್ನು, ಏಕತ್ವದಲ್ಲಿ ಕೇಂದ್ರೀಕರಿಸಿದರೆ, ನಿಮ್ಮಲ್ಲಿ ನಿಶ್ಚಯವಾಗಿಯೂ ಈ ಶಕ್ತಿ ಉಂಟಾಗುತ್ತದೆ. ಇತರರಿಗೆ ಶರೀರ ಮೂಲಕವೂ, ಮನಸ್ಸು ಮೂಲಕವೂ, ಬುದ್ಧಿ ಮೂಲಕವೂ, ಪ್ರವೃತ್ತಿ ಮೂಲಕವೂ, ಮಾತು ಮೂಲಕವೂ, ಈ […]

ಕೆನ್ಯ, ಎಪ್ರಿಲ್ 5: ಕೆನ್ಯಾ ಗಣರಾಜ್ಯದ ಉಪಾಧ್ಯಕ್ಷ ಕಲೋಂಜ಼ೋ ಮ್ಯುಸಿಯೋಕ ಅವರು ಕೆನ್ಯದ ಮಾತಾ ಅಮೃತಾನಂದಮಯಿ ಮಠದವರು ಕಟ್ಟಿಸಿಕೊಟ್ಟ ನೂತನ ಅನಾಥಾಲಯವನ್ನು ಅಮ್ಮನವರ ಸಾನ್ನಿಧ್ಯದಲ್ಲಿ ಉದ್ಘಾಟನೆ ಮಾಡಿದರು. ಅತಿ ನದಿ ಹತ್ತಿರ ನಡೆದ ಈ ಸಾರ್ವಜನಿಕ ಸಮಾರಂಭದಲ್ಲಿ ಉಪಾಧ್ಯಕ್ಷರೇ ಅಲ್ಲದೆ ಇನ್ನೂ ಹಲವು ಗಣ್ಯರು ಭಾಗವಹಿಸಿದ್ದರು. ಕ್ರೀಡೆ ಮತ್ತು ಸಂಸ್ಕೃತಿ ಸಚಿವೆ ಶ್ರೀಮತಿ ವಾವಿನ್ಯಾ ನ್ದೇತಿ ಮತ್ತು ಜಿಲ್ಲಾ ಕಲೆಕ್ಟರ್, ಹಲವಾರು ಪಾರ್ಲಿಮೆಂಟ್ ಸದಸ್ಯರು, ಕೆನ್ಯಾದ ಖ್ಯಾತ ಗಾಯಕ ಎರಿಕ್ ವೈನೈನ ಅವರು ಉಪಸ್ಥಿತರಿದ್ದರು. ಮೊದಲ ಹಂತದಲ್ಲಿ […]