ಇಂದು ಭಾರತ ಹಲವು ಕ್ಷೇತ್ರಗಳಲ್ಲಿ ಸಾಧಿಸುತ್ತಿರುವ ಅಭಿವೃದ್ಧಿಯನ್ನು ಕಂಡು ಭರವಸೆ ಮೂಡುತ್ತಿದೆ. ಆರ್ಥಿಕ ಬೆಳವಣಿಗೆಯಲ್ಲಿಯೂ ಹಾಗು ವಿಜ್ಞಾನದಲ್ಲಿಯ ಪ್ರಗತಿಯಲ್ಲಿಯೂ ನಾವು ಬಹಳ ಮುಂದುವರಿಯುತ್ತಿದ್ದೇವೆ. ಮಂಗಳಯಾನ ಉಪಗ್ರಹದ ವಿಜಯವು ಇಡೀ ಲೋಕದ ಮನ್ನಣೆಯನ್ನು ನಮಗೆ ಗಳಿಸಿಕೊಟ್ಟಿದೆ. ಹಾಗಿದ್ದರೂ ಸಹ, ಭಾರತದಲ್ಲಿನ ಪ್ರತಿಯೊಂದು ಬಡವರ ಜೀವನದಲ್ಲಿಯೂಕೂಡ ಮಂಗಳವು ಸಂಭವಿಸುವಾಗ ಮಾತ್ರವೇ  ನಮ್ಮಯ ಅಭಿವೃದ್ಧಿಗಳೆಲ್ಲವೂ ನಿಜವಾದ ಅರ್ಥವನ್ನು ಮತ್ತು ಪೂರ್ಣತೆಯನ್ನು ಹೊಂದುವುದು.ಕಳೆದ ಎರಡು ವರ್ಷಗಳಿಂದ ಆಶ್ರಮವು ಭಾರತದಾದ್ಯಂತ ನೂರಾರು ಗ್ರಾಮಗಳನ್ನು ದತ್ತುಪಡೆದು ಅಲ್ಲಿ ಸೇವಾಕಾರ್ಯಗಳನ್ನು ನಡೆಸುತ್ತಿದೆ. ಹಲವು ಗ್ರಾಮಗಳ ಸ್ಥಿತಿಯನ್ನು ಕಾಣುವಾಗ ದುಃಖವುಂಟಾಗುತ್ತದೆ. ನೂರು ವರ್ಷಗಳ ಹಿಂದಿನ ಅದೇ ಸ್ಥಿತಿ ಇಗಲೂ ಈ ಹಳ್ಳಿಗಳಲ್ಲಿ ಮುಂದುವರೆಯುತ್ತಿದೆ. ಗ್ರಾಮಗಳನ್ನು ಅವಗಣಿಸಿ ಸಾಧಿಸುವ ಅಭಿವೃದ್ಧಿಗಳು, ಶರೀರದ ಕೈಕಾಲುಗಳು ಬೆಳೆದು ಇತರ ದೇಹದಭಾಗಗಳು ಬೆಳೆಯದೇ ಹೋದಹಾಗೆ ಆಗುವುದು.

ಭಾರತದ ಆತ್ಮ ಗ್ರಾಮಗಳು

ಭಾರತದ ಆತ್ಮ ಗ್ರಾಮಗಳು ಎಂಬುದನ್ನು ನಾವು ಮರೆಯಬಾರದು. ನಾವು ಗ್ರಾಮಗಳ ಸಾಂಸ್ಕಾರಿಕ ಮೌಲ್ಯಗಳನ್ನು ಕಾಪಾಡಬೇಕು, ಜೊತೆಗೆ, ಕಾಲೋಚಿತವಾದ ಭೌತ್ತಿಕ ಸಂಪತ್ತುಗಳನ್ನೂ ಗಳಿಸಬೇಕು. ಒಂದು ಹೊತ್ತಿನ ಆಹಾರವನ್ನೂ ಹೊಂದಿಸಲಾಗದೆ ನೊಂದಿರುವಾಗಲೂ, ಸ್ವಂತ ದುಃಖವನ್ನೂ, ನೋವುಗಳೆಲ್ಲವನ್ನೂ “ಇತರರು ಅರಿಯದಿರಲಿ, ಅವರಿಗೆ ಕಷ್ಟವಾಗದಿರಲಿ” ಎಂದು ಯೋಚಿಸುವ ಕುಂಟುಬಗಳಾಗಿದ್ದವು – ಅಮ್ಮನ ಗ್ರಾಮದಲ್ಲಿ. ಈ ರೀತಿಯ ಕುಟುಂಬಗಳು ಇಂದಿಗೂ ಭಾರತದಲ್ಲಿ ಹಲವಾರು ಇವೆಯೆಂಬುದು ಗ್ರಾಮಗಳಲ್ಲಿ ಸೇವೆಯನ್ನು ಮಾಡಲು ಹೋದ ಅಮ್ಮನ ಮಕ್ಕಳು ಹೇಳಿದಾಗ ಅರಿಯಲು ಸಾಧ್ಯವಾಯಿತು. ನಾವು ಆಲೋಚಿಸಿದರೆ ಇತರರ ದುಃಖಗಳನ್ನು, ದುರಿತಗಳನ್ನು ಬಹಳಷ್ಟು ಬದಲಾಯಿಸಲು ಸಾಧ್ಯವಿದೆ. ಒಳಗೆ ಕರುಣೆಯು ಉದಯಿಸುವಾಗ ಮಾತ್ರವೇ ಮನುಷ್ಯ ಮನುಷ್ಯನಾಗುವುದು

UNESCO chair is being announced for Amrita University

ಸ್ಪಷ್ಟತೆಯನ್ನು ನೀಡುವಂತದ್ದಾಗಿರಬೇಕು ವಿದ್ಯಾಭ್ಯಾಸ

’ಜಿಮ್ ಗೆ’ ಹೋಗಿ ಕೈಗಳ ’ಮಜ಼ಲ್’ ಮಾತ್ರ ಬೆಳೆಸುವ ವ್ಯಾಯಾಮವನ್ನು ಮಾಡುವಹಾಗೆಯಿದೆ ಸಮಾಜದಲ್ಲಿ ಇಂದಿನ ವಿದ್ಯಾಭ್ಯಾಸ. ಹಾಗೆ ಮಾಡಿದರೆ, ಆ ಭಾಗದ ಮಜ಼ಲ್ ಗಳು ಮಾತ್ರ ಬಳೆದು ಶರೀರದ ಉಳಿದ ಭಾಗಗಳೆಲ್ಲವೂ ಅನುಪಾತವಿಲ್ಲದೆ ವಿಕೃತವಾಗಿ ಹೋಗುತ್ತದೆ. ಇದರಂತೆಯೇ, ಇಂದು ದೊರಕ್ಕುತ್ತಿರುವ ವಿದ್ಯಾಭ್ಯಾಸವು, ಬುದ್ಧಿ ನೆನಪಿನಶಕ್ತಿ ಬೆಳದ ಮನುಷ್ಯನನ್ನು ಅತ್ಯಂತ ಹೆಚ್ಚು ಉತ್ಪಾದಕಶಕ್ತಿಯನ್ನು ಹೊಂದಿದ ಯಂತ್ರಗಳಾಗಿಸುವಂತಹದ್ದಾಗಿದೆ.

ಮಾತಿನಲ್ಲೂ ಆಲೋಚನೆಯಲ್ಲಿಯೂ ನಡತೆಯಲ್ಲಿಯೂ ದೃಷ್ಟಿಕೋನದಲ್ಲಿಯೂ ಸಂಸ್ಕಾರದ ಸ್ಪಷ್ಟತೆಯನ್ನು ನೀಡುವಂತದ್ದಾಗಿರಬೇಕು ವಿದ್ಯಾಭ್ಯಾಸ. ಅದು ಸಕಲ ಜೀವರಾಶಿಗಳ ಅಖಂಡತೆಯನ್ನುದ್ದೇಶಿಸಿ ಅರಿವನ್ನು ಮನುಷ್ಯನಲ್ಲಿ ಸೃಷ್ಟಿಸುವಂಥದ್ದಾಗಿರಬೇಕು.

’ನಾನು ಎಂದಿಗೂ ಜಯಿಸಬೇಕು’ ಎಂದೇ ಎಲ್ಲರೂ ಯೋಚಿಸುವುದು. ’ನಾನು ನಾನು ನಾನು’ ಎಂದಾಗಿ ಎಲ್ಲರ ಮುಖ್ಯ ಅಭಿಮತ ಹಾಗು ಧ್ಯೇಯವಾಕ್ಯವಾಗಿದೆ. ಈ ವಿಧದಲ್ಲಿ ಫಲವನ್ನು ಮಾತ್ರ ನಿರೀಕ್ಷಿಸಿ ಕರ್ಮವನ್ನು ಮಾಡುವಾಗ ಎಂಥದ್ದೇ ಹೀನಕೃತ್ಯವನ್ನು ಕೂಡ ಮಾಡಲು ಮನುಷ್ಯ ಹಿಂಜರಿಯುವುದಿಲ್ಲ. ಕಾರಣ ’ನನ್ನನ್ನು’ ಬಿಟ್ಟು ಉಳಿದವರೆಲ್ಲರೂ ಶತ್ರುಗಳಾಗಿಬಿಡುತ್ತಾರೆ. ಎಲ್ಲ ಸ್ವಂತ ತನ್ನ ಅಧೀನದಲ್ಲಿರಬೇಕು ಎಂಬ ಮನುಷ್ಯನ ನೀಚವಾದ ಈ ಸ್ಪರ್ಧಾತ್ಮಕ ಬುದ್ಧಿಯು ಅವನ ಕರ್ಮಗಳನ್ನು ಅಪ್ರಾಮಾಣಿಕ ಹಾಗು ಅಪೂರ್ಣವೂ ಆಗಿಸುವುದು. ಕರ್ಮದಲ್ಲಿ ಅನ್ವಯಿಸುವ ಸಂತೋಷವು ಹಾಗು ಜವಾಬ್ದಾರಿಯು ಫಲವನ್ನು ಪೂರ್ಣತೆಗೆ ಮುಟ್ಟಿಸುವುದು.

ಪ್ರಾಮಾಣಿಕ ಸಹಕಾರ ಹಾಗು ಗೆಳೆತನ, ಉತ್ಪಾದಕಶಕ್ತಿಯನ್ನು, ಗುಣಮಟ್ಟತೆಯನ್ನು ವರ್ಧಿಸುತ್ತದೆ. ಬದಲಿಗೆ ಅಧಮವಾದ ಪೈಪೋಟೀತನವಲ್ಲ. ಅದೇ ವ್ಯಕ್ತಿಗಳನ್ನು, ಸಮಾಜವನ್ನು, ಉನ್ನತ ಸ್ಥಾನಗಳನ್ನು ಮೀರಿಸಲು ಸಹಾಯಕವಾಗುತ್ತದೆ. ಮಕ್ಕಳೆ, ಜೇನುದುಂಬಿಗಳನ್ನು ಗಮನಿಸಿಲ್ಲವೆ? ಅವುಗಳ ಉತ್ಪಾದಕಶಕ್ತಿಯ, ಜೇನುತುಪ್ಪದ ಗುಣಮಟ್ಟತ್ತೆಯ, ಪರಿಶುದ್ಧತೆಯ ರಹಸ್ಯವೇನು? ಅವುಗಳ ಪರಸ್ಪರ ಸಹಾಯಕ ಗುಣ, ಗೆಳೆತನ, ಐಕ್ಯತೆ. ಎಲ್ಲಕ್ಕಿಂತಲೂ ಮಿಗಿಲಾಗಿ ಸ್ವಂತ ಕರ್ಮದಲ್ಲಿ ಆ ಜೀವಿಗಳು ತೋರುವ ಅಚ್ಚರಿಸುವ ಶ್ರದ್ಧೆ.

-ಅಮ್ಮನ ೬೩ನೇ ಜನ್ಮದಿನದ ಸಂದೇಶದಿಂದ ಆಯ್ದಭಾಗಗಳು