27 ಅಕ್ಟೋಬರ್, 2010
ಅಮೃತಪುರಿ

ಅಮಲ ಭಾರತಂ ಕ್ಯಾಂಪೇನ್ (ಏ.ಬಿ.ಸಿ.) ಅನ್ನುವ ಈ ಬೃಹದ್‌ಯೋಜನೆಯ ಸ್ವಯಂಸೇವಕರು ಬರುವ ಒಕ್ಟೋಬರ್ 31ರಂದು ಕೇರಳದಾದ್ಯಂತ, 14 ಜಿಲ್ಲೆಗಳ 54ಕ್ಕೂ ಮೀರಿದ ಸಾರ್ವಜನಿಕ ಸ್ಥಳಗಳಲ್ಲಿ ಶುಚೀಕರಣ ಯಜ್ಞ ನಡೆಸುವರು. ಶುಚೀಕರಣ ಯಜ್ಞದಲ್ಲಿ ಅಮಲ ಭಾರತಂ ಜೊತೆ ಸಾರ್ವಜನಿಕರ ಬೆಂಬಲವು ಸೇರಿಕೊಂಡಿದೆ. ಇದು ನವೆಂಬರ್ ಒಂದರಂದು ಆಚರಿಸಲ್ಪಡುವ ಕೇರಳದ 54ನೇ ರಾಜ್ಯೋತ್ಸವದ ಜೊತೆ ಜೋಡಿಕೊಂಡಿದೆ.

ಮುಂಬರುವ ದಿನಗಳಲ್ಲಿ, ಅಮಲ ಭಾರತಂ ಕ್ಯಾಂಪೇನ್‌ (Amala Bharatam Campaign – ABC) ನ ಈ ಆರಂಭದ ಹಂತವು, ನಿರ್ಮಲ ಭಾರತದ ಆದರ್ಶಗಳಿಗೆ ಹೊಸ ಪ್ರೇರೇಪಣೆಯನ್ನು ಮತ್ತು ಪ್ರೋತ್ಸಾಹವನ್ನು ನೀಡುವುದೆಂದು ಆಶಿಸಲಾಗಿದೆ.

ಎರಡು ದಿನಗಳ ಹಿಂದೆ ತಮಿಳ್ನಾಡಿನ ಕೊಯಂಬತ್ತೂರಿನಲ್ಲೂ ಈ ಕಾರ್ಯಕ್ರಮ ಶುರುವಾಯಿತು.