ಹೃದಯವಿಲ್ಲದ ಜೀವನ ಇವತ್ತು ನಾವು ನಡೆಸುತ್ತಿರುವುದು. ಶವಕ್ಕೆಮೇಕಪ್ ಮಾಡಿದ ಹಾಗೆ. ನೌಕರಿಗೆ ಬೇಕಾಗಿ ಜೀವಿಸುತ್ತಿದ್ದೇವೆಯೇ ಹೊರತು ಜೀವಿಸಲಿಕ್ಕೆ ಬೇಕಾಗಿ ನೌಕರಿ ನಾವು ಮಾಡುವುದಲ್ಲ. ನಾವು ಇವತ್ತು ನಡೆಯುತ್ತಿರುವ ಕಂಪ್ಯೂಟರ್‌ನಂತೆ; ನಮ್ಮ ಜೀವನ ಯಾಂತ್ರಿಕವಾಗಿ ಬಿಟ್ಟಿದೆ. – ಅಮ್ಮ

27 ಸೆಪ್ಟಂಬರ್, 2010 ದುರಸ್ತಿಯ

“ಶುಚಿತ್ವವೇ ದಿವ್ಯತ್ವವು. ಪ್ರಕೃತಿದತ್ತವಾದ ಯಾವೊಂದನ್ನೂ ಅಂದಗೊಳಿಸುವುದರಲ್ಲಿ ಅರ್ಥವಿಲ್ಲ. ಅದಕ್ಕೆ ನಿರ್ವಹಣೆಯ ಅಗತ್ಯವಿಲ್ಲ. ಕಾಡಿಗೂ ಕಡಲಿಗೂ ಮಲೆಗಳಿಗೂ ನದಿಗಳಿಗೂ ನಿಸರ್ಗದತ್ತವಾದ ಸೌಂದರ್ಯವಿದೆ. ಅದೊಂದನ್ನೂ ಗುಡಿಸಿ ಸಾರಿಸಿ ಸ್ವಚ್ಚವಾಗಿಡುವ ಅವಶ್ಯಕತೆಯಿಲ್ಲ. ಮನುಷ್ಯನೇ ಅವೆಲ್ಲವುಗಳನ್ನು ಮಲಿನಗೊಳಿಸುವುದು. ಆದರೂ ಮನುಷ್ಯ ಸೃಷ್ಟಿಸಿದ್ದೆಲ್ಲವನ್ನೂ ದಿನಾಲೂ ಶುಚಿಯಾಗಿಡಬೇಕು. ದುರಸ್ತಿ ಮಾಡಬೇಕು. ಆದರೆ ನಮ್ಮ ಸಾರ್ವಜನಿಕ ಸ್ಥಳಗಳನ್ನೂ ಅಲ್ಲಿರುವ ಮೂತ್ರಾಲಯಗಳನ್ನೂ ಕಕ್ಕಸುಗಳನ್ನೂ ನಮ್ಮ ರಸ್ತೆಗಳನ್ನೂ ನಾವು ಸರಿ ಸುಮಾರು ಪೂರ್ಣವಾಗಿಯೆ ಅವಗಣಿಸಿದಂತಿದೆ.

ಶುಚಿಹೀನತೆಯ ಹೆಸರಲ್ಲಿ, ನಾವು ನಮ್ಮ ದೇಶಕ್ಕೆ ಮಾಡಿರುವ ಅಪಮಾನ ಕಮ್ಮಿಯೇನಲ್ಲ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸ್ಪೋರ್ಟ್ಸ್‌ಮನ್‌ಗಳಿಗೆ ವಾಸಕ್ಕೆಂದು ಮಾಡಿದ ಕಟ್ಟಡಗಳಲ್ಲಿ ಕೂಡ ತಂಬಾಕು ಉಗಿದೋ, ಎಲ್ಲಾ ರೀತಿಯ ಕಸ ಬಿಸಾಕಿಯೋ ನಾವು ಕೊಳೆ ಮಾಡುತ್ತೇವೆ. ಇದು ವಿದೇಶಿ ಚಾನಲ್‌ಗಳಲ್ಲಿ ತೋರಿಸಿ ನಮ್ಮ ತಮಾಷೆ ಮಾಡುತ್ತಾರೆ. ವಿದೇಶಿ ಮಾಧ್ಯಮಗಳಲ್ಲಿ ನಮ್ಮ ರೋಡುಗಳೂ ಸಾರ್ವಜನಿಕ ಸ್ಥಳಗಳೂ ಕೊಳಕೆಂಬ ಟೀಕೆಯನ್ನೊಳಗೊಂಡ ಲೇಖನಗಳು ಬಂದವು. ಇದೆಲ್ಲ ನೋಡುವಾಗ ಎಷ್ಟೊಂದು ನೋವಾಗುತ್ತದೆ.

ಭಾರತ ಅಣುಶಕ್ತಿ ರಾಷ್ಟ್ರವಾಗಿದೆ. ಆರ್ಥಿಕ ವೈಜ್ಞಾನಿಕ ತಾಂತ್ರಿಕ ರಂಗಗಳಲ್ಲಿ ಭಾರತ ಮುಂದುವರೆಯುತ್ತಿದೆ. 2025ರಲ್ಲಿ ಭಾರತವು ಲೋಕದಲ್ಲೆ ಮೂರನೆಯ ಶಕ್ತಿಯಾಗುವುದು ಎಂದೆಲ್ಲ ಹೇಳುತ್ತಿದ್ದಾರೆ. ಆದರೂ, ಪರಿಸರ ಶುಚೀಕರಣ ಕಾರ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿಲ್ಲ ಎನ್ನುವ ಸ್ಥಿತಿಯಲ್ಲಿದ್ದೇವೆ. ಹುಟ್ಟಿದೂರಿನ ಆತ್ಮಾಭಿಮಾನಕ್ಕೆ ತಿವಿದು ಗಾಯ ಮಾಡುವಾಗ ಹೃದಯದಲ್ಲಿ ನೋವಾಗಬೇಕು, “ಈ ಗತಿ ಇಲ್ಲದಂತಾಗಲು ನಾನೇನು ಮಾಡಲು ಸಾಧ್ಯ” ಎಂದು ಪ್ರಾಮಾಣಿಕ ಚಿಂತನೆ ಮಾಡಬೇಕು. ನಮ್ಮಿಂದ ಸಾಧ್ಯವಿರುವ ಕಾರ್ಯಗಳನ್ನು ಮಾಡಲು ಶ್ರಮಿಸಬೇಕು. ಪತ್ರಿಕೆಗಳ, ಟಿ.ವಿ.ಮಾಧ್ಯಮಗಳ ಕೊಡುಗೆ ಈ ದಿಕ್ಕಿನಲ್ಲಿ ಒಂದು ದೊಡ್ಡ ಪರಿವರ್ತನೆ ಮಾಡುವುದು ಎಂಬ ನಂಬಿಕೆ ನನ್ನದು”

ಕೇರಳದಲ್ಲೆಲ್ಲ ಶುಚೀಕರಣದ ಒಂದು ಹೊಸ ಅಧ್ಯಾಯ ತೆರೆಯುವುದೆಂದೂ ಇದಕ್ಕಾಗಿ ಸ್ವಯಂಸೇವಕರಿಗೆ ಸೈಕಲ್‌ಗಳನ್ನೂ, ವಿದ್ಯಾರ್ಥಿಗಳಿಗೆ ಹತ್ತು ಲಕ್ಷ ಕರವಸ್ತ್ರಗಳನ್ನೂ ಹಂಚಲಾಗುವುದೆಂದು ತನ್ನ 57ನೇ ಜನ್ಮದಿನದಂದು ಮಾತನಾಡುತ್ತಾ ಅಮ್ಮ ನುಡಿದರು.

27 ಸೆಪ್ಟಂಬರ್, 2010

ಕೇಂದ್ರ ಐ.ಟಿ. ಮಂತ್ರಿ ಗುರುದಾಸ್ ಕಾಮತ್‌ರವರು ಅಮೃತ ಶ್ರೀ ಸುರಕ್ಷಾ ಯೋಜನೆಯ ಉದ್ಘಾಟನೆ ಮಾಡಿದರು. 10,000 ಅಮೃತ ಶ್ರೀಯ ಮಹಿಳಾ ಸದಸ್ಯರಿಗೆ ಈ ಮೂಲಕ ವಿಮಾ ಪಾಲಿಸಿ ಈ ಸಮಾರಂಭದಲ್ಲಿ ಸಿಕ್ಕಿದಂತಾಯಿತು. ಒಟ್ಟು ಒಂದು ಲಕ್ಷ ಅಮೃತ ಶ್ರೀ ಮಹಿಳೆಯರು ಇಂಶೂರೆನ್ಸ್ ಸೌಲಭ್ಯಕ್ಕೆ ಅರ್ಹರು.

ಒಂದು ನಿಶ್ಚಿತ ಆದಾಯ ತರುವ ಮನೆಯ ಸದಸ್ಯಳಿಗೆ ಮರಣವೋ ಅಂಗಹೀನತೆಯೋ ಸಂಭವಿಸಿದರೆ ಸಂಸಾರದ ಆರ್ಥಿಕ ಆಧಾರ ಸ್ಥಂಭವೆ ಉರುಳಿ, ಬದುಕು ದುರ್ಬರ ಬವಣೆಯಾಗುವುದನ್ನು ಮನಗಂಡ ಅಮ್ಮ ಅವರಿಗೆ ಸುರಕ್ಷಿತತೆಯ ಹೊಸ ಜಾಲವನ್ನೆ ನೇಯ್ದರು ಈ ಅಮೃತ ಶ್ರೀ ಸುರಕ್ಷಾ ಯೋಜನೆಯನ್ನು ಸೃಷ್ಟಿಸಿ.

ಅಮೃತ ಶ್ರೀ ಮತ್ತು ಎಲ್.ಐ.ಸಿ.ಯ ಸಹಯೋಗದಿಂದ ಪ್ರಾಥಮಿಕವಾಗಿ ಕುಟುಂಬದ ಆರ್ಥಿಕ ಸುರಕ್ಷಿತತೆಗಾಗಿ ವಿನ್ಯಾಸಗೊಂಡ ಅಮೃತ ಶ್ರೀ ಸುರಕ್ಷಾ ಯೋಜನೆ ಫಲ ಕೊಡುವುದು ವಿಮೆಯ ಮೂಲಕ. ಸ್ವಾಭಾವಿಕ ಮರಣಕ್ಕೆ 40,000 ರುಪಾಯಿಗಳೂ, ದುರ್ಮರಣಕ್ಕೆ 85,000 ರುಪಾಯಿಗಳೂ, ತಾತ್ಕಾಲಿಕ ಅಂಗಹೀನತೆಗೆ 35,000 ರುಪಾಯಿಗಳೂ, ಶಾಶ್ವತ ಅಂಗಹೀನತೆಗೆ 75,000 ರುಪಾಯಿಗಳೂ ಇನ್ಶೂರೆನ್ಸ್ ಮೂಲಕ ಪರಿಹಾರವಾಗಿ ಲಭಿಸುತ್ತದೆ. ಆಶ್ರಮವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಿಮೆ ರಕ್ಷಣೆಯಿರುವ 15 % ಅಮೃತ ಶ್ರೀ ಸುರಕ್ಷಾ ಯೋಜನೆಯ ಮಹಿಳೆಯರ ಪ್ರತಿ ಮಗುವಿಗೆ 1,200 ರುಪಾಯಿಗಳ ವಾರ್ಷಿಕ ವಿದ್ಯಾರ್ಥಿ ವೇತನ ಕೂಡ ನೀಡುವುದು.

27ನೇ ಸೆಪ್ಟಂಬರ್,2010

ಡಾ. ಎನ್.ಪರಮೇಶ್ವರನ್ ಉಣ್ಣಿಯವರಿಗೆಮಾತಾ ಅಮೃತಾನಂದಮಯಿ ಮಠವು ಅಮೃತಕೀರ್ತಿ ಪುರಸ್ಕಾರ ನೀಡಿ ಗೌರವಿಸಿತು. ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ದರ್ಶನ ಶಾಸ್ತ್ರಗಳ ಸಾಹಿತ್ಯಕ್ಕೆ ಡಾ. ಉಣ್ಣಿಯವರ ಕೊಡುಗೆ ವಿಶಾಲವಾದುದು, ಮಹತ್ವದ್ದು ಹಾಗೂ ಪ್ರೌಢವಾದುದು.

ಭಾರತವರ್ಷದ ಸಂಸ್ಕೃತಿಯ ಜೋಪಾಸನೆಗೆ – ಸರಕಾರಿ ಹಾಗೂ ಖಾಸಗಿ ವಿದ್ಯಾ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ, ಶ್ರೀ ಶಂಕರಾಚಾರ್ಯ ಸಂಸ್ಕೃತ ಯೂನಿವರ್ಸಿಟಿ, ಹಾಗೂ ಕೇರಳ ಯೂನಿವರ್ಸಿಟಿಯ ಹಿಂದಿನ ವೈಸ್-ಚಾನ್ಸಲರ್‌ ಆಗಿ – ಉಣ್ಣಿಯವರ ಕೊಡುಗೆ ಅಪಾರ.

ಸಂಸ್ಕೃತ ನಾಟಕ, ಕ್ಷೇತ್ರ ತಂತ್ರ ವಿದ್ಯ, ಶಾಸ್ತ್ರ, ಶಾಸ್ತ್ರೀಯ ಸಂಸ್ಕೃತ ಸಾಹಿತ್ಯ, ಅನುವಾದ ಮುಂತಾದ ಕ್ಷೇತ್ರಗಳಲ್ಲಿ, ಇಂಗ್ಲಿಷಿನಲ್ಲಿ 38 ಗ್ರಂಥಗಳನ್ನು ರಚಿಸಿರುವುದಲ್ಲದೆ ಅನೇಕ ಉಪನಿಷತ್ತುಗಳನ್ನೂ ಪುರಾಣಗಳನ್ನೂ ಮಲೆಯಾಳಕ್ಕೆ ಭಾಷಾಂತರಿಸಿದ್ದಾರೆ. ಇಷ್ಟಲ್ಲದೆ, 150ಕ್ಕಿಂತಲೂ ಅಧಿಕ ಪ್ರಬಂಧಗಳನ್ನು ಇಂಡೋಲಾಜಿಕಲ್ ಜರ್ನಲ್‌ಗಳಲ್ಲಿ ಪ್ರಕಟಿಸಿರುವುದಲ್ಲದೆ, ಡಜನ್‌ಗಟ್ಟಲೆ ದೇಶ ವಿದೇಶಗಳ ಶಾಸ್ತ್ರಜ್ಞರಿಗೆ, ಅವರ ಪಿಎಚ್.‌ಡಿ.ಗೆ ಮಾರ್ಗದರ್ಶಕರಾಗಿದ್ದರು.

ಈ ವಾರ್ಷಿಕ ಅಮೃತ ಕೀರ್ತಿ ಪುರಸ್ಕಾರವು ಮಾತಾ ಅಮೃತಾನಂದಮಯಿ ಮಠದಿಂದ 1,23,456 ರುಪಾಯಿಗಳ ನಗದು ಬಹುಮಾನ, ಪ್ರಸಿದ್ಧ ಶಿಲ್ಪಿಯಿಂದ ಕೆತ್ತಲ್ಪಟ್ಟ ಶ್ರೀ ಸರಸ್ವತಿ ದೇವಿಯ ವಿಗ್ರಹ ಹಾಗೂ ಶಿಫಾರಸು ಪತ್ರವನ್ನೊಳಗೊಂಡಿರುತ್ತದೆ.

2001ರಲ್ಲಿ ಮಾತಾ ಅಮೃತಾನಂದಮಯಿ ಮಠವು (ಮಾ.ಅ.ಮ.) ಅಮೃತಕೀರ್ತಿ ಪುರಸ್ಕಾರವನ್ನು ನೀಡುವ ಪದ್ಧತಿ ಪ್ರಥಮವಾಗಿ ಜಾರಿಯಲ್ಲಿ ತಂದಿತು.

ಪುರಸ್ಕಾರವನ್ನು ಸ್ವೀಕರಿಸಿ “ಆಧ್ಯಾತ್ಮಿಕ ಪ್ರಗತಿಗೆ ನನ್ನ ಜೀವನವನ್ನು ಮುಡಿಪಾಗಿರಿಸುವೆನು ಹಾಗೂ ಅದಕ್ಕೆ ಅಮ್ಮನ ಮಾರ್ಗದರ್ಶನ ಕೋರುತ್ತೇನೆ” ಎಂದು ತಮ್ಮ ಸ್ವೀಕಾರ ಭಾಷಣದಲ್ಲಿ, ತುಂಬಿದ ಸಭೆಗೆ ವಿನಯಪೂರ್ವಕವಾಗಿ ಹೇಳಿ ಅಮ್ಮನತ್ತ ತಿರುಗಿ ತಲೆ ಬಾಗಿಸಿ ವಂದಿಸಿದರು.

29ನೇ ಸೆಪ್ಟಂಬರ್, 2010, ಅಮೃತಪುರಿ

27ನೇ ಬೆಳಿಗ್ಗೆ ಐದು ಗಂಟೆಗೆ ಶುರುವಾದ ಜನ್ಮ ದಿನದ ಉತ್ಸವ ತೆರೆ ಕಂಡದ್ದು ಮಾರನೆಯ ಬೆಳಿಗ್ಗೆ 8.45ಕ್ಕೆ, ಈ ಕೆಳಗಿನ ಎಲ್ಲಾ ಕಾರ್ಯಕ್ರಮಗಳ ನಂತರ:

  • ಮಹಾ ಗಣಪತಿ ಹೋಮ.
  • ವಿಶ್ವ ಶಾಂತಿಗಾಗಿ ಸಾವಿರಗಟ್ಟಲೆ ಭಕ್ತರಿಂದ ಲಲಿತಾ ಸಹಸ್ರ ನಾಮಾರ್ಚನೆ.
  • “ಅಮ್ಮನ ಬದುಕು, ಉಪದೇಶ” – ಸ್ವಾಮಿ ಅಮೃತಸ್ವರೂಪಾನಂದರಿಂದ ಮಾತು.
  • ಬೆಳಿಗ್ಗೆ 9.00, ಅಮ್ಮನ ವೇದಿಕೆಯ ಮೇಲೆ ಆಗಮನ, ಮೋಹಿನಿ ಆಟ್ಟಂನ ಸ್ವಾಗತ ಪ್ರದರ್ಶನದ ಮಧ್ಯದಲ್ಲಿ.
  • ಅಮ್ಮನ ಪಾದ ಪೂಜೆ – ಗುರು ಗೀತೆ ಹಾಗೂ ಅಮ್ಮನ ಅಷ್ಟೋತ್ತ ಪಠಣರದೊಂದಿಗೆ, ಸ್ವಾಮಿ ಅಮೃತಸ್ವರೂಪಾನಂದರಿಂದ.
  • ಹಿರಿಯ ಶಿಷ್ಯರಿಂದ ಅಮ್ಮನಿಗೆ ಹಾರಾರ್ಪಣೆ.
  • ಅಮ್ಮನಿಂದ ಜನ್ಮ ದಿನದ ಸಂದೇಶ. ಇಂಗ್ಲೀಷಿನಲ್ಲಿ ಅನುವಾದ ಸ್ವಾಮೀಜಿಯವರಿಂದ.
  • ಅತಿಥಿಗಳನ್ನು ಸ್ವಾಗತಿಸುತ್ತಾ ಸ್ವಾಮೀಜಿಯವರು ಹೇಳಿದ್ದು ಹೀಗೆ:
  • “ಇಂದು ಜಗತ್ತಿನ ಕಣ್ಣುಗಳು ಅಮ್ಮನ ಮೇಲಿದೆ, ಆದರೆ ಅಮ್ಮ ಏನು ಮಾಡುತ್ತಾರೆ? ನಮ್ಮ ದೃಷ್ಟಿಯನ್ನು ಬಡವರೆಡೆಗೆ, ನರಳುತ್ತಿರುವವರೆಡೆಗೆ, ಬಿದ್ದವರೆಡೆಗೆ, ರೋಗಿಗಳೆಡೆಗೆ, ಆಶಾರಹಿತರೆಡೆಗೆ ತಿರುಗಿಸುತ್ತಾರೆ. ನಮ್ಮ ದೃಷ್ಟಿಯನ್ನು ವಿಧವೆಯರತ್ತ, ಅಂಗಹೀನರತ್ತ, ದುರ್ಬಲರತ್ತ ತಿರುಗಿಸುತ್ತಾರೆ. ಅಂದರೆ ಇದು ಅಮ್ಮನ ಜನ್ಮ ದಿನದ ಸಂದೇಶದೊಂದು ಭಾಗ. ಇದೊಂದು ಉಪದೇಶ: ನಮ್ಮ ಜನ್ಮ- ನಮ್ಮ ನಿಜವಾದ ಜನ್ಮ – ಬೇರೆಯವರನ್ನು ನಮಗಿಂತಲೂ ಮುಂದಿಟ್ಟಾಗ ಆಗುತ್ತದೆ. ಇದು ಅಮ್ಮನ ಸಂದೇಶ: ಇಡೀ ಜಗತ್ತನ್ನೇ ನಿಮ್ಮ ಹೃದಯದಲ್ಲಿ ಸೇರ್ಪಡಿಸಿ; ಮುಕ್ತರಾಗಿ.”
  • ಡಾ. ಎನ್.ಪರಮೇಶ್ವರನ್ ಉಣ್ಣಿಯವರಿಗೆ (ಹಿಂದಿನ ವೈಸ್-ಚಾನ್ಸಲರ್, ಶ್ರೀ ಶಂಕರಾಚಾರ್ಯ ಸಂಸ್ಕೃತ ಯೂನಿವರ್ಸಿಟಿ, ಕಾಲಡಿ, ಕೇರಳ) ಅಮೃತಕೀರ್ತಿ ಪುರಸ್ಕಾರ ಸಮರ್ಪಣೆ.
  • ಅಮೃತ ಶ್ರೀ ಸುರಕ್ಷಾ ಯೋಜನೆಯ ಉದ್ಘಾಟನೆ – ಕೇಂದ್ರ ಮಂತ್ರಿ ಶ್ರೀ ಗುರುದಾಸ್ ಕಾಮತ್‌ರಿಂದ.
  • ಅಮೃತ ನಿಧಿ ಪೆನ್ಷನ್ ಚೆಕ್ಕುಗಳ ವಿತರಣೆ, ಕೇಂದ್ರ ಮಂತ್ರಿಗಳಾದ ಶ್ರೀ. ಕೆ.ವಿ. ತೋಮಸ್ ಹಾಗೂ ಕೇರಳ ವಿರೋಧ ಪಕ್ಷದ ನಾಯಕ ಶ್ರೀ. ಊಮ್ಮೆನ್ ಚಾಂಡಿಯವರಿಂದ.
  • ವಿದ್ಯಾಮೃತಮ್ ವಿದ್ಯಾರ್ಥಿವೇತನ ಯೋಜನೆಗೆ 500 ಹೊಸ ವಿದ್ಯಾರ್ಥಿಗಳ ಸೇರ್ಪಡೆ ಹಾಗೂ ಚೆಕ್ ವಿತರಣೆ.
  • ಆಶ್ರಮದ ನೂತನ ಪ್ರಕಾಶನ ಸಂಸ್ಥೆಯಾದ “ಅಮೃತ ಬುಕ್ಸ್”‌ನ ಉದ್ಘಾಟನೆ ಹಾಗೂ ಅದರ ಹೊಸ ಪ್ರಕಟಣೆಗಳ ಬಿಡುಗಡೆ – ಅಮ್ಮನ ಜೀವನಚರಿತ್ರೆ ಮತ್ತು “ಫ್ರಮ್ ಅಮ್ಮಾಸ್ ಹಾರ್ಟ್” (ಎರಡೂ ಸ್ವಾಮಿ ಅಮೃತಸ್ವರೂಪಾನಂದರಿಂದ, ಇಂಗ್ಲೀಷ್‌ನಲ್ಲಿ,)
  • ಮಾತೃವಾಣಿ ಜನ್ಮ ದಿನೋತ್ಸವ ಪುರವಣಿಗೆಯ ಬಿಡುಗಡೆ.
  • www.amrita.in (ಅಮೃತ.ಇನ್) – ಎಂಬ ಒಂಬತ್ತು ಭಾಷೆಗಳ (ಕನ್ನಡ, ಸಂಸ್ಕೃತ, ಮಲೆಯಾಳ, ತಮಿಳು, ತೆಲುಗು, ಹಿಂದಿ, ಮರಾಠಿ, ಪಂಜಾಬಿ, ಬಂಗಾಲಿ) ವೆಬ್‌ಸೈಟ್‌ನ ಬಿಡುಗಡೆ – ಅಮ್ಮನ ವೆಬ್ ಸೈಟ್‌ನ ಚರಿತ್ರೆಯಲ್ಲಿ ಹೊಸ ದಾಖಲೆ.
  • ಭಾರತ ಸ್ವಚ್ಛವಾಗಿಡಲು ಹಾಗೂ ಪರಿಸರ ಸಂರಕ್ಷಿಸಲು, ಅಮೃತ ವಿದ್ಯಾಲಯಮ್ ಮತ್ತು ಅಮೃತ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಹಾಗೂ ಆಯುಧ್ ಸದಸ್ಯರು ಪ್ರತಿಜ್ಞೆ ಗೈದರು. ಸ್ಥಾನೀಯ ಯುವ ಜನತೆ ಮತ್ತು-ಬರಿಸುವ ವಸ್ತುಗಳು, ಮದ್ಯಪಾನ ಹಾಗೂ ತಂಬಾಕು ಸೇವನೆಯಿಂದ ವರ್ಜಿತರಾಗಿರುವ ಪ್ರತಿಜ್ಞೆ ಮಾಡಿದರು. ಎರಡೂ ಪ್ರತಿಜ್ಞೆಗಳನ್ನು ಓದಿಸಿದವರು ಸ್ವಾಮಿ ಅಮೃತಸ್ವರೂಪಾನಂದರವರು.
  • ಅತಿಥಿಗಳಿಂದ ಮಾತು.
  • ಬಟ್ಟೆ, ಬಂಗಾರ ಹಾಗೂ ಭೋಜನದ ಎಲ್ಲ ವೆಚ್ಚ ಆಶ್ರಮ ಭರಿಸಿದ, ಆಶ್ರಮದ ವತಿಯಿಂದ 54 ಜೋಡಿಗಳ ಸಾಮೂಹಿಕ ಮದುವೆ.
  • ದರ್ಶನದ ವೇಳೆಯಲ್ಲಿ ಮಾತೃವಾಣಿ ಪ್ರಚಾರಕರಿಗೆ ಬಹುಮಾನ ವಿತರಣೆ.

ಆಗಮಿಸಿದ ಲಕ್ಷಗಟ್ಟಲೆ ಅಮ್ಮನ ಭಕ್ತರಿಗೆ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿಯ ಮೂರು ದಿನಗಳ ಅವ್ಯಾಹತ ಅನ್ನದಾನ.
ಮಾರನೇ ಬೆಳಿಗ್ಗಿನ 8.45ರ ತನಕ, ಅಮ್ಮನ ಅವಿರತ ದರ್ಶನ.