ಕಳೆದ 10 ವರ್ಷಗಳಿಂದ ಅಮ್ಮನ ಜಾಗತಿಕ ಸೇವಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ತಮ್ಮ ಸಂಪ್ರದಾಯವನ್ನು ಈ ವರ್ಷವೂ ಪಾಲಿಸಿಕೊಂಡು ಬಂದ ಜಪಾನಿನ ಅಂತರ್ರಾಷ್ಟ್ರೀಯ ಛಾತ್ರ ಸ್ವಯಂಸೇವಕ ಸಂಘದ (International Volunteer University Student Association – IVUSA ), 60 ಯುವಕ ಯುವತಿಯರು ಈ ವರ್ಷ ಬಂದದ್ದು, ರಾಯಚೂರಿಗೆ.

42 ಡಿಗ್ರಿಯ ತಾಪಮಾನವೂ ಅವರ ಸೇವಾ ಮನೋಭಾವಕ್ಕೂ ಉತ್ಸಾಹಕ್ಕೂ ಯಾವುದೇ ತಡೆಯಾಗುವಲ್ಲಿ ಸಫಲವಾಗಲಿಲ್ಲ. ಗೃಹನಿರ್ಮಾಣ ಕಾರ್ಯದಲ್ಲಿ ಶ್ರದ್ಧೆಯಿಂದ ಸೇವೆ ಸಲ್ಲಿವುದಲ್ಲದೆ, ಹಳ್ಳಿಗರೊಂದಿಗೆ ಸ್ನೇಹದಿಂದ ಬೆರೆತು ಹೋಳಿ ಆಚರಿಸಿದರು, ಹತ್ತಿರದ ಬೆಟ್ಟದ ಮೇಲಿದ್ದ ಶಿವ ಮಂದಿರಕ್ಕೂ ಭೇಟಿಕೊಟ್ಟರು. ಅಮ್ಮ ಭಾರತ ಯಾತ್ರೆಯಲ್ಲಿದ್ದರೂ, ತನ್ನ ಮಕ್ಕಳಿಗೆಂದು, ಸೆಖೆಯಿಂದ ರಕ್ಷಿಸಿಕೊಳ್ಳಲು ಕೊಡೆ-ಟೊಪ್ಪಿಗೆಗಳನ್ನು ಕಳುಹಿಸಿದರು.

ಮುಂದೆ ಇವರು ಮುಂಬೈಗೆ ಬಂದು ಅಮ್ಮನನ್ನು ಭೇಟಿಯಾದದ್ದು ಮಾತ್ರವಲ್ಲದೆ ತಮ್ಮ ಹೃದಯಪೂರ್ವಕ ಕೃತಜ್ಞತೆಯನ್ನು ಸಲ್ಲಿಸಲು ಪುನಃ ದೆಹಲಿಯಲ್ಲೂ ಅಮ್ಮನನ್ನು ಸಂದರ್ಶಿಸಿದರು.

ಮಕ್ಕಳೇ, ಸುತ್ತಲೂ ಒಂದು ಸಲ ದೃಷ್ಟಿ ಹರಿಸಿ ನೋಡಿ. ಅದನ್ನೊಮ್ಮೆ ವಿಷ್ಲೇಶಣೆ ಮಾಡಿ. ಲೋಕದ ಇವತ್ತಿನ ಪರಿಸ್ಥಿತಿ ಏನಂತ ಸ್ವಲ್ಪ ಅರಿತುಕೊಳ್ಳೋಣ. ಅದಕ್ಕೆಂದೇ ಇರುವ ದಿವಸವಿದು. ಜಗತ್ತಿನ ಜನಗಳು ಎಷ್ಟೆಲ್ಲಾ ತರದಲ್ಲಿ ಕಷ್ಟ ಪಡುತ್ತಿದ್ದಾರೆ. ಅವರ ಜೀವನವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಒಂದು ವರ್ಷದ ಹಿಂದೆ ನಡೆದ ಘಟನೆಯೊಂದು ಅಮ್ಮನಿಗೆ ನೆನಪಾಗುತ್ತಿದೆ; ಮುಂಬೈಯಲ್ಲಿನ ಮಕ್ಕಳು ಹೇಳಿ ಗೊತ್ತಾಗಿದ್ದು. ಮುಂಬೈಯಲ್ಲಿ ಒಂದು ಕಡೆ ಒಬ್ಬಾತನಿಗೆ ಷುಗರಿನ ಖಾಯಿಲೆಯಿತ್ತು. ಆ ವ್ಯಕ್ತಿಯ ಕಾಲಲ್ಲಿ ಒಂದು ಗಾಯವಾಗಿ, ಬಲಿತು ದೊಡ್ಡ ಹುಣ್ಣಾಯಿತು. ಡಾಕ್ಟರಿಗೆ ತೋರಿಸಿದಾಗ “ಆ ಕಾಲು ಕತ್ತರಿಸಿ ತೆಗೆಯಬೇಕು. ಇಲ್ಲದಿದ್ದರೆ ಕೀವಾಗಿ ಮುಂದಕ್ಕೆ ತೊಂದರೆ ಕೊಡುತ್ತದೆ, ದೊಡ್ಡ ಸಮಸ್ಯೆಯಾಗುತ್ತದೆ” ಎಂದು ಹೇಳಿದರು. ವ್ಯಕ್ತಿಗೆ ತುಂಬ ಚಿಂತೆಯಾಯಿತು . ಕಾಲು ಕಳೆದುಕೊಳ್ಳಬೇಕೆಂಬ ದುಃಖ ಮಾತ್ರವಲ್ಲ; ಆ ಒಪರೇಷನ್‌ಗೂ ಹತ್ತು ಹದಿನೈದು ಸಾವಿರ ರುಪಾಯಿ ಬೇಕಾಗಿ ಬರಬಹುದು. ಅಲ್ಲದೆ, ಒಂದು ಖಾಯಂ ವರಮಾನವಿರುವ ವ್ಯಕ್ತಿಯೇನಲ್ಲ ಅವನು. ಸಿಗುವದ್ದು, ಸಂಸಾರ ನಿರ್ವಹಣೆಗೆಯೇ ಸಾಲುವುದಿಲ್ಲ. ಕಾಲಿನ ಖಾಯಿಲೆ ಬಂದ ಮೇಲಿಂದ ಮೊದಲಿನ ಹಾಗೆ ಕೆಲಸಕ್ಕೂ ಹೋಗಲು ಸಾಧ್ಯವಿಲ್ಲ. ಡಾಕ್ಟರು ಬರೆದುಕೊಟ್ಟ ಔಷಧಿ ಖರೀದಿಸಲಿಕ್ಕೂ ಹಣವಿಲ್ಲದೆ ತುಂಬ ಕಳವಳಪಡುತ್ತಾನೆ. ಹಾಗಿರುವ ಒಬ್ಬ ವ್ಯಕ್ತಿ ಒಪರೇಷನಿಗೆ ಎಲ್ಲಿಂದ ತಾನೆ ಹಣ ಒಟ್ಟುಗೂಡಿಸುತ್ತಾನೆ. ಈತ ಪೂರ್ತಿ ಚಿಂತೆಯಲ್ಲಿ ಮುಳುಗಿಹೋದ. ಒಂದು ದಿವಸ ಈ ಪಾಪದವ ರೈಲ್ವೇಹಳಿ ಹತ್ತಿರ ಹೋಗಿ ಟ್ರೈನ್ ಬರುವಾಗ ಅದರಡಿ ಹಳಿಮೇಲೆ ಆ ಕಾಲಿಟ್ಟ. ಟ್ರೈನ್ ಹರಿದು ಕಾಲನ್ನು ಕತ್ತರಿಸಿತು. ಆದರೆ, ರಕ್ತಸ್ರಾವ ಬಹಳವಾಗಿ, ಇನ್ನೇನು ಅಂತಿಮ ಗಳಿಗೆ ಮುಟ್ಟಬೇಕು ಅನ್ನುವಾಗ, ಜನರು ಇವನನ್ನು ತೆಗೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸುತ್ತಾರೆ. ನಡೆದ ಘಟನೆ ಬಗ್ಗೆ ಕೇಳಿದಾಗ, “ನನಲ್ಲಿ ಕಾಲು ಕತ್ತರಿಸಿ ತೆಗೆಸುವ ಒಪರೇಷನ್‌ಗೆ ಕಾಸಿಲ್ಲ. ಕಾಲು ಕತ್ತರಿಸಿ ತೆಗೆಯದೆ, ಈ ಕಾಯಿಲೆಯಿಂದಾಗಿ ಜೀವಿಸುವುದೂ ಕಷ್ಟವೇ. ಒಪರೇಷನ್‌ಗೆ ಹಣವಿಲ್ಲದೆ ನನ್ನೆದುರಿಗೆ ಬೇರೆ ಯಾವುದೇ ದಾರಿಯಿರಲಿಲ್ಲ. ಅದರಿಂದಾಗಿ ಹೀಗೆ ಮಾಡಬೇಕಾಗಿ ಬಂತು.” ಎಂದು ಹೇಳಿದ.

ಮಕ್ಕಳೇ ಆ ಜೀವನವನ್ನು ಒಮ್ಮೆ ಕಣ್ಣು ಬಿಟ್ಟು ನೋಡಿ. ಇವತ್ತು ನಮ್ಮಲ್ಲಿ ಆಸ್ಪತ್ರೆಯಿದೆ*. ಎಲ್ಲರಿಗೂ ಧರ್ಮಾರ್ಥವಾಗಿ ಮಾಡಿಸಲು ಸಾಧ್ಯವಿಲ್ಲದಿದ್ದರೂ ಹಲವು ಬಡವರಿಗೆ ಅಲ್ಲಿ ಉಚಿತ ಒಪರೇಷನ್ ಮಾಡಿಸಲಾಗುತ್ತಿದೆ. ಆದರೆ, ಅವರು ಆಸ್ಪತ್ರೆಯನ್ನು ಬಿಟ್ಟ ನಂತರ ಸೇವಿಸಬೇಕಾದ ಔಷಧಿಗಳಿವೆ. ಅದು ಕೊಂಡುಕೊಳ್ಳಲು ಹಲವರಲ್ಲಿ ಕಾಸಿಲ್ಲ. ಒಪರೇಷನ್ ನಂತರ ಕೆಲವು ದಿನಗಳಾದರೂ ವಿಶ್ರಾಂತಿಯ ಅವಶ್ಯವಿದೆಯೆಂದು ಹೇಳಿದರೆ ಅವರಿಗೆ ಕೆಲಸಕ್ಕೆ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ. ಆ ಕುಟುಂಬಗಳು ಹಸಿವಿನಿಂದ ಕಂಗಾಲಾಗಿ ಚಪಡಿಸುತ್ತಿರುವ ಪರಿಸ್ಥಿತಿ ನಮಗೆ ಕಾಣಲು ಸಿಗುತ್ತದೆ. ಸುತ್ತಲೂ ಒಮ್ಮೆ ದೃಷ್ಟಿ ಹರಿಸಿದರೆ, ಹೀಗೆ ಕಷ್ಟ ಪಡುತ್ತಿರುವ, ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದ ದುರಂತವನ್ನನುಭವಿಸುವ ಎಷ್ಟು ಕುಟುಂಬಗಳನ್ನು ಬೇಕಾದರೂ ಕಾಣಬಹುದು. ಈ ಸಂದರ್ಭದಲ್ಲಿ ನಾವು ಆಡಂಬರಕ್ಕೂ ಇನ್ನಿತರ ಅನಾವಶ್ಯಕ ವಿಷಯಗಳಿಗೂ ಖರ್ಚು ಮಾಡುವ ಹಣದ ಬಗ್ಗೆ ಯೋಚಿಸೋಣ. ಅದಿದ್ದರೆ ಒಬ್ಬ ಬಡವನಿಗೆ ಮದ್ದು ಕೊಂಡುಕೊಳ್ಳಲು ಸಾಧ್ಯವಾಗುವುದು; ಒಂದು ಕುಟುಂಬದ ಒಪ್ಪತ್ತಿನ ಊಟಕ್ಕೆ ಸಾಲುವುದು; ಒಂದು ಬಡಮಗುವಿಗೆ ವಿದ್ಯಾಭ್ಯಾಸ ನೀಡಿ ಅದರ ಭವಿಷ್ಯ ಬೆಳಗುವಂತೆ ಮಾಡಬಹುದು. ಈ ಒಂದು ಮನೋಭಾವ – ಎಲ್ಲರನ್ನು ಪ್ರೇಮಿಸಲೂ, ಸೇವೆ ಮಾಡಲೂ ಇರುವ ಭಾವ – ವನ್ನೇ ನಾವು ಆಧ್ಯಾತ್ಮಿಕತೆಯಲ್ಲಿ ಜಾಗೃತಗೊಳಿಸಿಕೊಳ್ಳಬೇಕಾಗಿರುವುದು.

— 2000 ರಲ್ಲಿನ ಅಮ್ಮನ ಜನ್ಮದಿನದ ಸಂದೇಶದಿಂದ

—–

* (ಕೇರಳದ ಕೊಚ್ಚಿಯಲ್ಲಿರುವ ಅಮ್ಮನ ಸುಪರ್ ಸ್ಪೆಷ್ಯಾಲಿಟಿ ಆಸ್ಪತ್ರೆ – AIMS Hospital. ಸಂದರ್ಶಿರಿ ವೆಬ್ ಸೈಟ್ )

ಧ್ಯಾನವು ಚಿನ್ನದ ಹಾಗೆ ಬಹು ಮೂಲ್ಯವುಳ್ಳದು. ಭೌತಿಕ ಐಶ್ವರ್ಯಕ್ಕೂ,ಮೂಕ್ತೀಗೂ,ಶಾಂತಿಗೂ ಧ್ಯಾನವು ಒಳ್ಳೆಯದು. ಅದಕ್ಕಾಗಿ ಉಪಯೋಗಿಸುವ ಸಮಯ ಎಂದಿಗೂ ನಷ್ಟವಾಗುವಂತದಲ್ಲ. ನದಿಯ ದಡದಲ್ಲಿ ದೋಣಿಯನ್ನು ಕಟ್ಟಿಟ್ಟು ಹುಟ್ಟು ಹಾಕುವದಾದರೆ ಆಚೆಯದಡಕ್ಕೆ ಮುಟ್ಟುವುದಿಲ್ಲ. ಅದೇ ರೀತಿ “ನಾನು” ಎನ್ನುವ ಚಿಂತೆಯನ್ನು ಬಿಟ್ಟು “ನಿನ್ನ” {ಭಗವಂತನ} ಕೈಯಲ್ಲಿನ ಲೇಖನಿ, ಅಥವಾ ಬಣ್ಣ ಹಚ್ಚುವ ಒಂದು ಬ್ರಶ್ ಎನ್ನುವ ರೀತಿಯಲ್ಲಿ ರ್ಪೂಣವಾಗಿ ಸಮರ್ಪಿಸಬೇಕು. ಈ ರೀತಿಯ ಶರಣಾಗತಿಯನ್ನು ನಮ್ಮಲ್ಲಿ ಬೆಳೆಸಿಕ್ಕೊಳ್ಳಬೇಕು. ಪ್ರಯತ್ನಿಸ ಬಾರದು ಎಂದಲ್ಲ; ಹಾಗೆ ಅರ್ಥ ಮಾಡಿಕೊಳ್ಳಬಾರದು. ಪ್ರಯತ್ನಕ್ಕೆ ಯಾವಾಗಲು ಒಂದು ಪರೀಧಿ ಇದೆ. ಅದನ್ನು ಪೂರ್ಣವಾಗಿಸುವುದು ಕೃಪೆ. ನಾವು ಯಾತ್ರೆ ತುಂಬಾ ಚೆನ್ನಾಗಿತ್ತು ಎನ್ನುತ್ತೇವೆ. ಆದರೆ ನಾವು ಯಾತ್ರೆ ಮಾಡುವಾಗ ನಮ್ಮ ಮುಂದೇ, ಹಿಂದೇ ಎಷ್ಟೋ ವಾಹನಗಳು ಹಾದು ಹೋಗುತ್ತವೆ. ಅದರಲ್ಲಿರುವ ಯಾವುದಾದರು ಒಬ್ಬ ಚಾಲಕ ಒಂದು ನಿಮಿಷವಾದರು ಅಶ್ರಧ್ಧೆಯಿಂದ ವಾಹನವನ್ನು ಚಲಾಯಿಸಿದ್ದರೆ, ನಮ್ಮ ಸಾವು ಖಂಡಿತ. ಅದೊಂದೂ ಸಂಭವಿಸದೆ ನಮ್ಮನ್ನು ಸುರಕ್ಷಿತವಾಗಿ ಗುರಿತಲುಪಿಸಿರುವದು ಭಗವಂತನ ಕೃಪೆಯೊಂದೇ. ಕೃಪೆ ದೊರಕಬೇಕೆಂದರೆ ಪ್ರತಿಯೊಂದು ಮಾತಿನಲ್ಲೂ, ಕೆಲಸದಲ್ಲೂ ವಿನಯವನ್ನು ನಾವು ಬೇಳೆಸಿಕೊಳ್ಳಬೇಕು. ವಿನಯದ ಭಾಷೆಯೆಂದರೆ ತಲೆಭಾಗಿಸುವುದಲ್ಲ; ಅದು ಪ್ರೇಮದ ಭಾಷೆಯಾಗಿದೆ. ಮಕ್ಕಳ ಹೃದಯದಲ್ಲಿರುವ ನಿಸ್ವಾರ್ಥತೆ ಮತ್ತು ಭಗವಂತನ ಪ್ರೇಮದ ದೀಪವು ಈ ಲೋಕಕ್ಕೆ ಬೆಳಕಾಗಲಿ.

(ಅಮ್ಮನ ೨೦೦೧ ಜನ್ಮದಿನದ ಸಂದೇಶದಿಂದ)

ತೊಂಬತ್ತು ಪ್ರತಿಶತ ಮಕ್ಕಳು ಶಾರೀರಿಕ ಮತ್ತು ಮಾನಸಿಕ ಒತ್ತಡಗಳಿಂದ ಪ್ರತಿಯೊಂದು ನಿಮಿಷವು ದುಃಖದಿಂದ ಕಳೆಯುತ್ತಿದ್ದಾರೆ. ಚಿಂತಿಸುವುದರಿಂದ ಮಾತ್ರ ಕೆಲಸವಾಗವುದಿಲ್ಲ ಎಂದು ನಮಗೆ ಗೊತ್ತು. ಐವತ್ತು ಪ್ರತಿಶತ ರೋಗಗಳು ಬರುವುದು ಮಾನಸಿಕ ಒತ್ತಡಗಳಿಂದ ಎಂದು ಹೇಳುತ್ತಾರೆ. ಆರೋಗ್ಯಹೀನತೆ ಮತ್ತು ಅಲ್ಪಾಯುಷಿಯಾಗುವುದಲ್ಲ ಜೀವನದ ಉದ್ದೇಶ. ಅನಾವಶ್ಯಕ ಮಾನಸಿಕ ಒತ್ತಡ ನಮಗೆ ಏತಕ್ಕೆ ಬೇಕು? ಅದರ ಬದಲಿಗೆ ಶರಣಾಗತರಾಗುವುದೇ ನಮಗಿರುವ ಪ್ರಾಯೋಗಿಕ ಪರಿಹಾರ.

ಒಂದು ಗಿಡದ ಬುಡಕ್ಕೆ ನೀರು ಹಾಕಿದರೆ, ಗಿಡವು ಚೆನ್ನಾಗಿ ಬೇಗ ಬೆಳೆಯುತ್ತದೆ. ಆದರೆ ಅದರ ಕೊಂಬೆಗಳಿಗೆ ನೀರು ಹಾಕಿದರೆ ಅದು ಬೆಳೆಯುವದೂ ಇಲ್ಲ; ಯಾವ ಫಲವೂ ನೀಡುವುದಿಲ್ಲ. ನಾವು ಕಷ್ಟ ಪಟ್ಟ ಸಮಯವೂ ವ್ಯರ್ಥ. ಮಕ್ಕಳೇ! ಅಮ್ಮನ ಬಳಿ ಸ್ವಲ್ಪ ಸಮಯ, ಬೇರೆಲ್ಲವನ್ನು ಮರೆತು ಈ ನಿಮಿಷದಲ್ಲಿರುವುದಕ್ಕೆ ಪ್ರಯತ್ನಿಸಿ. ಇಲ್ಲಿ ಕುಳಿತು ಮನೆಯಲ್ಲಿರುವವರ ಬಗ್ಗೆ ಚಿಂತಿಸಿದರೆ ಅವರಿಗೂ ಲಾಭವಿಲ್ಲ ನಿಮಗೂ ಲಾಭವಿಲ್ಲ. ಈ ನಿಮಿಷಮಾತ್ರವೇ ನಮಗಿರುವುದು. ಈ ನಿಮಿಷದಲ್ಲಿ ವಿವೇಕದಿಂದ ಮುನ್ನಡೆದರೆ ನಿಶ್ಚಿತವಾಗಿ ಭವಿಷ್ಯವು ಸುರಕ್ಷಿತವಾಗಿರುವುದು.
ಹಲವು ಮಕ್ಕಳು ನಾಳೆಯ ಬಗ್ಗೆ ಚಿಂತಿಸಿ ಚಿಂತೆಗೀಡಾಗುತ್ತಾರೆ. ನಾಳೆಯ ಬಗ್ಗೆ ಚಿಂತಿಸಬಾರದು ಎನ್ನುತ್ತಿಲ್ಲ, ಆದರೆ, ಅದು ಒಂದು ವಿಷಸರ್ಪವಿರುವ ಮರದ ಕೆಳಗೆ ಮಲಗಿದ ಹಾಗೆ. ’ಸರ್ಪವು ಎಲ್ಲಿ ಕಡಿಯುವದೋ’ ಎನ್ನುವ ಚಿಂತೆಯಿಂದ ಹೇಗೆ ತಾನೇ ನಿದ್ರೆ ಬರುತ್ತದೆ? ಇದೇ ತರಹ ನಮ್ಮ ಜೀವನವು ನಾಳೆಯ ಬಗ್ಗೆ ಚಿಂತಿಸಿ, ಚಿಂತಿಸಿ ಮುಗಿದು ಹೋಗುತ್ತದೆ. ಒಬ್ಬ ಇಂಜಿನಿಯರ್ ಮನೆಯ ನಕ್ಷೆ ರಚಿಸುವಾಗ ಅದರಲ್ಲಿಯೇ ಪೂರ್ಣ ಶ್ರದ್ಧೆಯನ್ನಿಡುವನು. ಮನೆ ಕಟ್ಟುವಾಗ, ಕಟ್ಟುವುದರಲ್ಲಿಯೇ ಶ್ರದ್ಧೆ ವಹಿಸುವನು. ಅದೇ ತರಹ ನಾವು ನಾಳೆಯ ಬಗ್ಗೆ ಯೋಚಿಸಿ ನಿರ್ಧರಿಸೋಣ. ಈ ನಿಮಿಷದಲ್ಲಿ ವಿವೇಕದಿಂದ ಮುಂದೆಸಾಗೋಣ. ತೊಂದರೆಗಳನ್ನೆಲ್ಲಾ ನೀವು ಭಗವಂತನಲ್ಲಿ ಸಮರ್ಪಿಸರಿ.

ನಮ್ಮ ಕೈಯಲ್ಲಿ ಒಂದು ಲೋಟ ಕಾಫಿ ಇದೆ ಎಂದು ಭಾವಿಸೋಣ; ಸ್ವಲ್ಪ
ಸಮಯ ಅದನ್ನು ಎತ್ತಿಹಿಡಿಯಲು ಪ್ರಯಾಸವೇನೂ ಆಗುವುದಿಲ್ಲ. ಅದೇ ಒಂದು ಗಂಟೆಯವರೆಗೆ ಹಿಡಿದುಕೊಂಡರೆ, ಕೈ ನೋಯುತ್ತದೆ. ಅಥವಾ ಒಂದು ದಿನ ಪೂರ್ತಿ ಎತ್ತಿ ಹಿಡಿದುಕೊಂಡಿದ್ದರೆ… ಆ ಕೈಯನ್ನು ಕೆಳಗಿಳಿಸುವುದಕ್ಕಾಗಿ ಆಸ್ಪತ್ರೆಗೆ ಹೋಗಬೇಕಾಗುವುದು. ಇದೇ ರೀತಿ ನಮ್ಮ ಕೆಟ್ಟ ಚಿಂತೆಗಳು. ಅವುಗಳ ಭಾರವನ್ನು ಕೆಳಗೆ ಇಳಿಸದೆ ಹೋದರೆ, ನಡೆಯಬೇಕಾಗಿರುವುದಕ್ಕಾಗಿ ಚಿಂತಿಸುವುದಕ್ಕೋ ಕಾರ್ಯಶೀಲರಾಗುವುದಕ್ಕೋ ಸಾಧ್ಯವಾಗುವದಿಲ್ಲ. ಮನಸ್ಸಿನ ಸಮತೋಲನ ತಪ್ಪಿಹೋಗಬಹುದು. ಈ ರೀತಿ ಕೆಳಗಿಳಿಸುವ ಪ್ರಕ್ರಿಯೆಗಳಿಗೇ – ಪ್ರಾರ್ಥನೆ, ಜಪ ಮತ್ತು ಧ್ಯಾನ ಎಂದು ಕರೆಯುವುದು.

(ಅಮ್ಮನ ೨೦೦೧ ಜನ್ಮದಿನದ ಸಂದೇಶದಿಂದ)