Tag / ಕೃಪೆ

ನಮಗೆ ಸದಾ ದುಃಖ ಮಾತ್ರವೇ ಇರುವುದು. ನಿತ್ಯಾನಿತ್ಯ ಏನೆಂಬುದರ ಅರಿವಿಲ್ಲದಿರುವುದರಿಂದ, ನಮ್ಮ ಆಸೆಗಳು ಶಾಶ್ವತವಾದವುಗಳಿಗೆ ಅಲ್ಲವಾದ್ದರಿಂದ ನಾವು ಹೀಗೆ ದುಃಖಿಗಳಾಗಿದ್ದೇವೆ. ಈ ದುಃಖದಿಂದಾಗಿ ಉರಿದುರಿದು ನಾವು ರೋಗಿಗಳಾಗುತ್ತೇವೆ; ನಮ್ಮ ಆಯುಷ್ಯವೂ ಕ್ಷೀಣಿಸುತ್ತದೆ. ಪ್ರೀತಿಯ ಮಕ್ಕಳೇ, ನಮ್ಮ ಕೆಲಸಗಳನ್ನು ನಾವು ಚೆನ್ನಾಗಿ ಮಾಡುತ್ತಿರುತ್ತೇವೆ. ಎಲ್ಲಿ ಹೋದರೂ ಅಲ್ಲಿಯ ದೋಷಗಳನ್ನು, ಕುಂದು ಕೊರತೆಗಳನ್ನು ನಾವು ಕಂಡು ಹಿಡಿಯುತ್ತೇವೆ; ನಮ್ಮ ಮನಸ್ಸು ಅಸ್ವಸ್ಥವಾಗುತ್ತದೆ. ಈ ದೃಷ್ಟಿಕೋನವಲ್ಲ ನಮಗೆ ಬೇಕಾಗಿರುವುದು. ಒಂದು ಕಡೆ ಏನು ಕಾಣಲಿಲ್ಲ ಎಂಬುದನ್ನು ಮರೆತು, ನಮಗೆ ಬೇಕಾದದ್ದು ಅಲ್ಲಿ […]

ಧ್ಯಾನವು ಚಿನ್ನದ ಹಾಗೆ ಬಹು ಮೂಲ್ಯವುಳ್ಳದು. ಭೌತಿಕ ಐಶ್ವರ್ಯಕ್ಕೂ,ಮೂಕ್ತೀಗೂ,ಶಾಂತಿಗೂ ಧ್ಯಾನವು ಒಳ್ಳೆಯದು. ಅದಕ್ಕಾಗಿ ಉಪಯೋಗಿಸುವ ಸಮಯ ಎಂದಿಗೂ ನಷ್ಟವಾಗುವಂತದಲ್ಲ. ನದಿಯ ದಡದಲ್ಲಿ ದೋಣಿಯನ್ನು ಕಟ್ಟಿಟ್ಟು ಹುಟ್ಟು ಹಾಕುವದಾದರೆ ಆಚೆಯದಡಕ್ಕೆ ಮುಟ್ಟುವುದಿಲ್ಲ. ಅದೇ ರೀತಿ “ನಾನು” ಎನ್ನುವ ಚಿಂತೆಯನ್ನು ಬಿಟ್ಟು “ನಿನ್ನ” {ಭಗವಂತನ} ಕೈಯಲ್ಲಿನ ಲೇಖನಿ, ಅಥವಾ ಬಣ್ಣ ಹಚ್ಚುವ ಒಂದು ಬ್ರಶ್ ಎನ್ನುವ ರೀತಿಯಲ್ಲಿ ರ್ಪೂಣವಾಗಿ ಸಮರ್ಪಿಸಬೇಕು. ಈ ರೀತಿಯ ಶರಣಾಗತಿಯನ್ನು ನಮ್ಮಲ್ಲಿ ಬೆಳೆಸಿಕ್ಕೊಳ್ಳಬೇಕು. ಪ್ರಯತ್ನಿಸ ಬಾರದು ಎಂದಲ್ಲ; ಹಾಗೆ ಅರ್ಥ ಮಾಡಿಕೊಳ್ಳಬಾರದು. ಪ್ರಯತ್ನಕ್ಕೆ ಯಾವಾಗಲು ಒಂದು […]