27/09/2010, ಅಮೃತಪುರಿ

ಒಂಬತ್ತು ಭಾರತೀಯ ಭಾಷೆಗಳಲ್ಲಿ ಆರಂಭಿಸಿದ ಮಾತಾ ಅಮೃತಾನಂದಮಯಿ ಮಠದ ಅಧಿಕೃತ ಅಂತರ್ಜಾಲಗಳನ್ನು ಬಿಷಪ್ ಮಾರ್ ಕ್ರಿಸೋಸ್ಟೆಮ್ ತಿರುಮೇನಿ (Bishop Mar Crisostem Metropolitan of Mar Thoma Church) ಉದ್ಘಾಟನೆ ಮಾಡಿದರು. ಕನ್ನಡ, ಮಲೆಯಾಳಂ, ತಮಿಳ್, ತೆಲುಗು, ಮರಾಠಿ, ಹಿಂದಿ, ಪಂಜಾಬಿ, ಬಂಗಾಳಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ಈಗ ಆಶ್ರಮದ ಅಂತರ್ಜಾಲ ಸೇವೆ ಲಭ್ಯವಿದೆ.

“ಐವತ್ತೇಳು ವರ್ಷಗಳಲ್ಲಿ ನೂರು ವರ್ಷಗಳ ಕೆಲಸ ಕಾರ್ಯಗಳನ್ನು ನಡೆಸಿದ ಅಮ್ಮ ಸಾಧಾರಣವಾದುದನ್ನು ಅಸಾಧಾರಣವಾದುದ್ದಾಗಿ ಮಾಡುತ್ತಾರೆಂದು ಮಾತ್ರ ಅಮ್ಮನನ್ನು ವಿವರಿಸಬಹುದು. ಸಾಧಾರಣದವರನ್ನು ಅಸಾಧಾರಣರನ್ನಾಗಿ ಮಾಡುವ ಎಲ್ಲಾ ವಿದ್ಯೆಗಳೂ ಅಮ್ಮನಲ್ಲಿವೆ.” ಎಂದು ಉದ್ಘಾಟನೆ ಮಾಡುತ್ತಾ ಕ್ರಿಸೋಸ್ಟೆಮ್ ನುಡಿದರು.

ಜಾಣ್ನುಡಿಗಳಿಂದ ತುಂಬಿದ ಭಾಷಣದಲ್ಲಿ ತನ್ನ ಹಾಗಲ್ಲ ಅಮ್ಮ ಎಂದು ಕ್ರಿಸೋಸ್ಟೆಮ್ ತಿರುಮೇನಿ ನುಡಿದರು. “ನಾವೆಲ್ಲ ಮಾತು ಮಾತ್ರ ಆಡುತ್ತೇವೆ. ಅಮ್ಮನದ್ದು ಮಾತು ಕಮ್ಮಿ; ಕೆಲಸ ಹೆಚ್ಚು.” ತನಗೆ ಅಮ್ಮನಲ್ಲಿ ಒಂದು ಕೋರಿಕೆ ಮಾತ್ರವೇ ಇರುವುದು. ಆರಾರು ತಿಂಗಳಿಗೊಮ್ಮೆ ಅಮ್ಮ ಮಠ ಸ್ಥಳಾಂತರಿಸಬೇಕು. ಅಂದರೆ ಮಾತ್ರ ಇಡೀ ಕೇರಳದ ಪ್ರಗತಿಯಾಗುವುದೆಂದು ಕ್ರಿಸೋಸ್ಟೆಮ್ ಅಂದರು. ಸಮುದಾಯದ ಅಧಃಪತನವಾಗುತ್ತಿದೆಯೆನ್ನುವವರಲ್ಲಿ ತನಗೆ ನೆನಪುಮಾಡಲಿಕ್ಕಿರುವುದು “ಅಮ್ಮ ಇಲ್ಲದಿರುತ್ತಿದ್ದರೆ ಸಮಾಜವೇ ಕಾಣಿಸುತ್ತಿರಲಿಲ್ಲವೆಂದು.”

ದೇಶದಲ್ಲಿ ಸಮಾಜಕ್ಕೆ ವಿಪತ್ತಾಗಿ ಪರಿಣಮಿಸಿರುವ ಮಾಲಿನ್ಯಕ್ಕೆ ವಿರುದ್ಧವಾಗಿ ಯುವಕರ ಹೊಸ ಯೋಜನೆ ಅಮ್ಮನ 57ನೇ ಜನ್ಮದಿನೋತ್ಸವದ ವೇದಿಕೆಯಿಂದ ಆರಂಭವಾಯಿತು. ಪರಿಸರ ಶುಚೀಕರಣ ತಮ್ಮ ಕರ್ತವ್ಯ ಎಂಬ ದೃಢ ಪ್ರತಿಜ್ಞೆಯನ್ನು ಅಮ್ಮನ ಮಕ್ಕಳು ಮಾಡಿದರು. “ನಿರ್ಮಲ ಭಾರತವು ಅಮೃತ ಭಾರತ” ಎನ್ನುವ ಅಮ್ಮನ ಘೋಷಣೆ ತಮ್ಮ ಜೀವನದ ವ್ರತ ಎಂದಾಗಿದೆ ಆ ಪ್ರತಿಜ್ಞೆ.

ಪ್ರತಿಜ್ಞೆ
ಭೂಮಿಯು ನನ್ನ ತಾಯಿ. ಶುಚಿತ್ವ ಪ್ರಜ್ಞೆಯು ದೈವತ್ವದ ಪ್ರಜ್ಞೆಯೇ ಆಗಿದೆಯೆಂಬ ಅರಿವಿನೊಂದಿಗೆ – ನನ್ನ ಜೀವನದ ಮುಂಬರುವ ದಿನಗಳಲ್ಲಿ ಪರಿಸರ ನೈರ್ಮಲ್ಯದ್ದೂ, ಶುಚಿತ್ವದ್ದೂ, ಸಾಮಾಜಿಕ ಅನಿವಾರ್ಯತೆಯನ್ನು ಅರ್ಥ ಮಾಡಿಕೊಳ್ಳುವುದು – ಅದನ್ನು ವಿಚಾರದಲ್ಲೂ ಕಾರ್ಯದಲ್ಲೂ ಅನ್ವಯಗೊಳಿಸುವುದೂ, ಎಂದೆಂದೂ ಪಾಲಿಸುವುದೂ ಆಗಿರುವುದು. “ನಿರ್ಮಲ ಭಾರತವು ಅಮೃತ ಭಾರತ” ಎನ್ನುವ ಶ್ರೀ ಮಾತಾ ಅಮೃತಾನಂದಮಯಿ ದೇವಿಯ ಬೋಧನೆಯನ್ನು ನಾನು ನನ್ನ ಜೀವನದ ದಾರಿದೀಪವಾಗಿ ಪರಿಗಣಿಸುತ್ತೇನೆ.

ಮಠದ ಈ ಹೊಸ ಯೋಜನೆಗೆ ರೋಟರಿ ಕ್ಲಬ್ಬುಗಳ ಬೆಂಬಲವನ್ನು ರೋಟರಿ ಡಿಸ್ಟ್ರಿಕ್ಟ್‌ನ ಹಿಂದಿನ ಗವರ್ನರ್ ವೇಣುಗೋಪಾಲ್ ಸಿ. ಗೋವಿಂದ್‌ರವರು ಘೋಷಿಸಿದರು.

ಅಧ್ಯಾತ್ಮವೇನಂದರೆ ಜೀವನದಲ್ಲಿ ನಾವು ಬಾಳುವ ಮೌಲ್ಯಗಳು. ಅವುಗಳೂ ತಂತ್ರ ಜ್ಞಾನವೂ ಕೈಮೇಳವಿಸಿದಾಗ ಮಾತ್ರವೇ ಮನುಕುಲಕ್ಕೆ ಸರಿಯಾದ ಬೆಳವಣಿಗೆಯೂ ವಿಕಾಸವೂ ಕರಗತವಾಗುವುದು. ಇದು ಹೇಗೆ ಸಾಧ್ಯವಾಗಿಸೋಣ ಎಂಬುವುದೇ ಈ ಶತಮಾನದ ಅತಿ ದೊಡ್ಡ ಸವಾಲು. – ಅಮ್ಮ

ನಾವು ವ್ಯಕ್ತಿಗಳನ್ನು ಪ್ರೇಮಿಸುವುದೂ, ವಸ್ತುಗಳನ್ನು ಉಪಯೋಗಿಸುವುದೂ ತಾನೆ ಮಾಡ ಬೇಕಾಗಿರುವುದು. ಆದರೆ ಇಂದು ನೇರ ವಿರುದ್ಧ ನಾವು ಮಾಡುತ್ತಿರುವುದು: ವ್ಯಕ್ತಿಗಳನ್ನು ಉಪಯೋಗಿಸುತ್ತೇವೆ; ವಸ್ತುಗಳನ್ನು ಪ್ರೀತಿಸುತ್ತೇವೆ. ಈ ತರ ಆದರೆ ಕುಟುಂಬಗಳ ಅವನತಿಯಾಗುತ್ತದೆ, ಸಮಾಜದ ತಾಳಲಯ ತಪ್ಪುತ್ತದೆ. – ಅಮ್ಮ

ಇವತ್ತು “ಯೌವನ” ಎಂದು ಹೇಳುವ ಕಾಲಘಟ್ಟ ಜೀವನದಲ್ಲಿ ಇಲ್ಲದಾಗಿ ಹೋಗುತ್ತಲಿದೆ. ಮನುಷ್ಯನು ಬಾಲ್ಯದಿಂದ ನೇರವಾಗಿ ಮುಪ್ಪಿನತ್ತ ಬೆಳೆಯುತ್ತಾನೆ. ದೇವರಾಗಿ ಮಾರ್ಪಡುವ ಸಾಧ್ಯತೆಯುಳ್ಳ ಮನುಷ್ಯನನ್ನು ಪಿಶಾಚಿಯಾಗಿ ಮಾರ್ಪಡಿಸುವ ಈ ಮದ್ಯಕ್ಕಿಂತ ದೊಡ್ಡ, ಬೇರೆ ವಿಷವಿಲ್ಲ ಅನ್ನುವ ಸತ್ಯವನ್ನು ಮಕ್ಕಳು ಎಂದಿಗೂ ಮರೆಯದಿರಲಿ.