Category / ವಾರ್ತೆ

27/09/2010, ಅಮೃತಪುರಿ ಒಂಬತ್ತು ಭಾರತೀಯ ಭಾಷೆಗಳಲ್ಲಿ ಆರಂಭಿಸಿದ ಮಾತಾ ಅಮೃತಾನಂದಮಯಿ ಮಠದ ಅಧಿಕೃತ ಅಂತರ್ಜಾಲಗಳನ್ನು ಬಿಷಪ್ ಮಾರ್ ಕ್ರಿಸೋಸ್ಟೆಮ್ ತಿರುಮೇನಿ (Bishop Mar Crisostem Metropolitan of Mar Thoma Church) ಉದ್ಘಾಟನೆ ಮಾಡಿದರು. ಕನ್ನಡ, ಮಲೆಯಾಳಂ, ತಮಿಳ್, ತೆಲುಗು, ಮರಾಠಿ, ಹಿಂದಿ, ಪಂಜಾಬಿ, ಬಂಗಾಳಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ಈಗ ಆಶ್ರಮದ ಅಂತರ್ಜಾಲ ಸೇವೆ ಲಭ್ಯವಿದೆ. “ಐವತ್ತೇಳು ವರ್ಷಗಳಲ್ಲಿ ನೂರು ವರ್ಷಗಳ ಕೆಲಸ ಕಾರ್ಯಗಳನ್ನು ನಡೆಸಿದ ಅಮ್ಮ ಸಾಧಾರಣವಾದುದನ್ನು ಅಸಾಧಾರಣವಾದುದ್ದಾಗಿ ಮಾಡುತ್ತಾರೆಂದು ಮಾತ್ರ ಅಮ್ಮನನ್ನು ವಿವರಿಸಬಹುದು. […]

ದೇಶದಲ್ಲಿ ಸಮಾಜಕ್ಕೆ ವಿಪತ್ತಾಗಿ ಪರಿಣಮಿಸಿರುವ ಮಾಲಿನ್ಯಕ್ಕೆ ವಿರುದ್ಧವಾಗಿ ಯುವಕರ ಹೊಸ ಯೋಜನೆ ಅಮ್ಮನ 57ನೇ ಜನ್ಮದಿನೋತ್ಸವದ ವೇದಿಕೆಯಿಂದ ಆರಂಭವಾಯಿತು. ಪರಿಸರ ಶುಚೀಕರಣ ತಮ್ಮ ಕರ್ತವ್ಯ ಎಂಬ ದೃಢ ಪ್ರತಿಜ್ಞೆಯನ್ನು ಅಮ್ಮನ ಮಕ್ಕಳು ಮಾಡಿದರು. “ನಿರ್ಮಲ ಭಾರತವು ಅಮೃತ ಭಾರತ” ಎನ್ನುವ ಅಮ್ಮನ ಘೋಷಣೆ ತಮ್ಮ ಜೀವನದ ವ್ರತ ಎಂದಾಗಿದೆ ಆ ಪ್ರತಿಜ್ಞೆ. ಪ್ರತಿಜ್ಞೆ ಭೂಮಿಯು ನನ್ನ ತಾಯಿ. ಶುಚಿತ್ವ ಪ್ರಜ್ಞೆಯು ದೈವತ್ವದ ಪ್ರಜ್ಞೆಯೇ ಆಗಿದೆಯೆಂಬ ಅರಿವಿನೊಂದಿಗೆ – ನನ್ನ ಜೀವನದ ಮುಂಬರುವ ದಿನಗಳಲ್ಲಿ ಪರಿಸರ ನೈರ್ಮಲ್ಯದ್ದೂ, ಶುಚಿತ್ವದ್ದೂ, […]

27 ಸೆಪ್ಟಂಬರ್, 2010 ಕೇಂದ್ರ ಐ.ಟಿ. ಮಂತ್ರಿ ಗುರುದಾಸ್ ಕಾಮತ್‌ರವರು ಅಮೃತ ಶ್ರೀ ಸುರಕ್ಷಾ ಯೋಜನೆಯ ಉದ್ಘಾಟನೆ ಮಾಡಿದರು. 10,000 ಅಮೃತ ಶ್ರೀಯ ಮಹಿಳಾ ಸದಸ್ಯರಿಗೆ ಈ ಮೂಲಕ ವಿಮಾ ಪಾಲಿಸಿ ಈ ಸಮಾರಂಭದಲ್ಲಿ ಸಿಕ್ಕಿದಂತಾಯಿತು. ಒಟ್ಟು ಒಂದು ಲಕ್ಷ ಅಮೃತ ಶ್ರೀ ಮಹಿಳೆಯರು ಇಂಶೂರೆನ್ಸ್ ಸೌಲಭ್ಯಕ್ಕೆ ಅರ್ಹರು. ಒಂದು ನಿಶ್ಚಿತ ಆದಾಯ ತರುವ ಮನೆಯ ಸದಸ್ಯಳಿಗೆ ಮರಣವೋ ಅಂಗಹೀನತೆಯೋ ಸಂಭವಿಸಿದರೆ ಸಂಸಾರದ ಆರ್ಥಿಕ ಆಧಾರ ಸ್ಥಂಭವೆ ಉರುಳಿ, ಬದುಕು ದುರ್ಬರ ಬವಣೆಯಾಗುವುದನ್ನು ಮನಗಂಡ ಅಮ್ಮ ಅವರಿಗೆ […]

27ನೇ ಸೆಪ್ಟಂಬರ್,2010 ಡಾ. ಎನ್.ಪರಮೇಶ್ವರನ್ ಉಣ್ಣಿಯವರಿಗೆಮಾತಾ ಅಮೃತಾನಂದಮಯಿ ಮಠವು ಅಮೃತಕೀರ್ತಿ ಪುರಸ್ಕಾರ ನೀಡಿ ಗೌರವಿಸಿತು. ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ದರ್ಶನ ಶಾಸ್ತ್ರಗಳ ಸಾಹಿತ್ಯಕ್ಕೆ ಡಾ. ಉಣ್ಣಿಯವರ ಕೊಡುಗೆ ವಿಶಾಲವಾದುದು, ಮಹತ್ವದ್ದು ಹಾಗೂ ಪ್ರೌಢವಾದುದು. ಭಾರತವರ್ಷದ ಸಂಸ್ಕೃತಿಯ ಜೋಪಾಸನೆಗೆ – ಸರಕಾರಿ ಹಾಗೂ ಖಾಸಗಿ ವಿದ್ಯಾ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ, ಶ್ರೀ ಶಂಕರಾಚಾರ್ಯ ಸಂಸ್ಕೃತ ಯೂನಿವರ್ಸಿಟಿ, ಹಾಗೂ ಕೇರಳ ಯೂನಿವರ್ಸಿಟಿಯ ಹಿಂದಿನ ವೈಸ್-ಚಾನ್ಸಲರ್‌ ಆಗಿ – ಉಣ್ಣಿಯವರ ಕೊಡುಗೆ ಅಪಾರ. ಸಂಸ್ಕೃತ ನಾಟಕ, ಕ್ಷೇತ್ರ ತಂತ್ರ ವಿದ್ಯ, ಶಾಸ್ತ್ರ, […]

29ನೇ ಸೆಪ್ಟಂಬರ್, 2010, ಅಮೃತಪುರಿ 27ನೇ ಬೆಳಿಗ್ಗೆ ಐದು ಗಂಟೆಗೆ ಶುರುವಾದ ಜನ್ಮ ದಿನದ ಉತ್ಸವ ತೆರೆ ಕಂಡದ್ದು ಮಾರನೆಯ ಬೆಳಿಗ್ಗೆ 8.45ಕ್ಕೆ, ಈ ಕೆಳಗಿನ ಎಲ್ಲಾ ಕಾರ್ಯಕ್ರಮಗಳ ನಂತರ: ಮಹಾ ಗಣಪತಿ ಹೋಮ. ವಿಶ್ವ ಶಾಂತಿಗಾಗಿ ಸಾವಿರಗಟ್ಟಲೆ ಭಕ್ತರಿಂದ ಲಲಿತಾ ಸಹಸ್ರ ನಾಮಾರ್ಚನೆ. “ಅಮ್ಮನ ಬದುಕು, ಉಪದೇಶ” – ಸ್ವಾಮಿ ಅಮೃತಸ್ವರೂಪಾನಂದರಿಂದ ಮಾತು. ಬೆಳಿಗ್ಗೆ 9.00, ಅಮ್ಮನ ವೇದಿಕೆಯ ಮೇಲೆ ಆಗಮನ, ಮೋಹಿನಿ ಆಟ್ಟಂನ ಸ್ವಾಗತ ಪ್ರದರ್ಶನದ ಮಧ್ಯದಲ್ಲಿ. ಅಮ್ಮನ ಪಾದ ಪೂಜೆ – ಗುರು […]