Category / ಅಮ್ಮನ ಸಂದೇಶ

ಪ್ರಶ್ನೆ: ಅಮ್ಮಾ, ಪಿತೃಕರ್ಮಕ್ಕೆ ಫಲಪ್ರಾಪ್ತಿಯಿದೆಯೇ ? ಮಕ್ಕಳೇ, ಶುದ್ಧ ಸಂಕಲ್ಪಕ್ಕೆ ದೊಡ್ಡ ಶಕ್ತಿಯಿದೆ. ಕರ್ಮ ಫಲಿಸಲೇ ಬೇಕೆಂದಿದ್ದರೆ ಶುದ್ಧ ಸಂಕಲ್ಪ ಬೇಕು. ಪಿತೃಕರ್ಮ ನಡೆಸುವಾಗ ಸತ್ತ ವ್ಯಕ್ತಿಯ ದಿನ, ನಾಮ ರೂಪ, ಭಾವಗಳನ್ನೆಲ್ಲ ಚಿಂತಿಸಿ ಮನಸ್ಸಲ್ಲಿ ಮಾತ್ರ ಜಪ ಮಾಡುತ್ತಾರೆ. ಮಕ್ಕಳೇ, ಪ್ರತಿಯೊಂದು ಕರ್ಮಕ್ಕೂ ಒಂದೊಂದು ದೇವತೆಯಿದೆ. ಪರ್ಶಿಯದಲ್ಲಿರುವ ಮಗನ ಕಾಗದ ಊರಲ್ಲಿರುವ ತಂದೆಗೂ ತಾಯಿಗೂ ಪೋಸ್ಟ್ ಮ್ಯಾನ್ ವಿಳಾಸ ತಪ್ಪದೆ ತಲಪಿಸುವುದಿಲ್ಲವೆ ? ಆದರೆ ಇದು ಖಂಡಿತ: ಸಂಕಲ್ಪ ಶುದ್ಧವಾಗಿದ್ದರೆ ಮಾತ್ರ ದೇವತೆಗಳು ಆಯಾಯ ಕರ್ಮದ […]

ಪ್ರಶ್ನೆ: ಅಮ್ಮಾ, ನಿರಾಕಾರನಾದ ದೇವರನ್ನು ಸಾಕಾರನಾಗಿ ಆರಾಧಿಸಬೇಕಾದ ಅವಶ್ಯಕತೆಯಿದೆಯೇ ? “ಮಕ್ಕಳೇ, ನಮ್ಮ ಸಂಸ್ಕಾರ, ಪ್ರತಿಯೊಬ್ಬ ಗೆಳೆಯನಲ್ಲಿ ನಮ್ಮ ದುಃಖಗಳನ್ನು ಹಂಚಿಕೊಂಡು, ಸುಖವನ್ನು ಅರಸೋಣ, ಎನ್ನುವಂತದ್ದು. ಅದನ್ನು ಒಂದು ವಿಶ್ವ ಸಂಕಲ್ಪವಾಗಿ ಪರಿವರ್ತಿಸುವುದು ಸಾಕಾರ ಉಪಾಸನೆಯ ಉದ್ದೇಶ. ಒಂದು ಮಗು ಆಟವಾಡಿಕೊಂಡಿರುವಾಗ ಸ್ನೇಹಿತನು ಸ್ವಲ್ಪ ಚಿವುಟಿದರೆ, ಅಳುತ್ತಾ ಹೋಗಿ ತಾಯಿಯಲ್ಲಿ ಹೇಳುತ್ತಾನೆ. ಸ್ವಲ್ಪ ಪ್ರಾಯ ಹೆಚ್ಚಾದಾಗ, ಮನೆಯಲ್ಲಿ ಅಮ್ಮ ಹೊಡೆದದ್ದು, ಅಣ್ಣ ಬೈದದ್ದು ಎಲ್ಲಾ ಸ್ನೇಹಿತನಲ್ಲಿ ಹೇಳುತ್ತಾನೆ. ಮುಂದೆ ಪ್ರೀತಿಸುವ ಹುಡುಗಿಯಲ್ಲಿ ತನ್ನ ದುಃಖವೆಲ್ಲ ಹೇಳಿ ಸಾಂತ್ವನ […]

ಪ್ರಶ್ನೆ: ಅಮ್ಮಾ, ದೇವಸ್ಥಾನಗಳಲ್ಲಿ ಹರಕೆ ಮತ್ತು ಹಲವು ಹೆಸರುಗಳಿಂದ ಎಷ್ಟೋ ಹಣ ಖರ್ಚು ಮಾಡುತ್ತಾರೆ. ದೇವರಿಗ್ಯಾಕೆ ಹಣ ಅಮ್ಮಾ ? “ಮಕ್ಕಳೇ, ದೇವರಿಗೆ ನಮ್ಮಿಂದ ಏನೂ ಬೇಡ. ಲೈಟ್‌ಗೆ ಸೀಮೆ ಎಣ್ಣೆ ದೀಪದ ಅವಶ್ಯಕತೆಯಿಲ್ಲ. ದೇವರು ಸೂರ್ಯನಂತೆ. ಅವನು ಸರ್ವ ಚರಾಚರಗಳಿಗೆ ಸಮನಾಗಿ ಪ್ರಕಾಶ ಬೀರುತ್ತಿದ್ದಾನೆ. ಎಲ್ಲವನ್ನೂ ಬೆಳಗಿಸುವ ಅವನಿಗೆ ಹರಿಕೆಯಾಗಿ ಎಣ್ಣೆ ಸಲ್ಲಿಸುತ್ತೇವಂದೂ, ದೀಪ ಹಚ್ಚುತ್ತೇವೆಂದೆಲ್ಲ ಹೇಳುತ್ತೇವೆ ! ಇದು ನಮ್ಮ ಅಜ್ಞಾನದ ಫಲ. ಹಗಲು ಸಮಯದಲ್ಲಿ ಕೈಯ್ಯಲ್ಲೊಂದು ಮೇಣದ ಬತ್ತಿ ಉರಿಸಿ ಹಿಡಿದುಕೊಂಡು, “ಸೂರ್ಯದೇವನೇ, […]

ಕೆಲಸಗಳನ್ನೆಲ್ಲ ಮಾಡಲಿಕ್ಕೆ ಯಂತ್ರಗಳನ್ನು ಕಂಡು ಹಿಡಿದಿರುವುದರಿಂದ ಇವತ್ತು ಮನುಷ್ಯನಿಗೆ ಒಂದು ಗಂಟೆಯಷ್ಟು ಕೂಡಾ ಕೆಲಸವಿಲ್ಲ. ಸಮಯ ಪೂರ್ತಿ ಮನಸ್ಸು ಬಣಗುಟ್ಟುತ್ತಿರುತ್ತದೆ. ದುರಾಲೋಚನೆಗಳೂ ದುಷ್ಪ್ರವೃತ್ತಿಗಳೂ ಹುಟ್ಟುವುದು ಆಗ. ನಿಮಗೆ ಸಿಗುವ ಸಮಯ ಪೋಲು ಮಾಡದೆ ಸಾಧನೆ ಮಾಡಿದರೆ ಮನಸ್ಸು ಭ್ರಷ್ಟವಾಗುವುದಿಲ್ಲ; ಅನೇಕರಿಗೆ ಸಹಾಯಕವಾಗುವುದು. ಸಯನ್ಸ್ ಈಗ ಕಂಡು ಹಿಡಿದಿರುವಂಥವುಗಳೋ, ಇನ್ನು ಕಂಡು ಹಿಡಿಯಲಿರುವಂಥವುಗಳೋ, ಯಾವುವೂ ನಿಮಗೆ ಸಮಾಧಾನ ಕೊಡಲು ಸಾಧ್ಯವಿಲ್ಲ. ಅದನ್ನೇನೂ ಅಮ್ಮ ತಪ್ಪೆಂದು ಹೇಳುವುದಿಲ್ಲ. ಇದೆಲ್ಲ ಕಂಡು ಹಿಡಿಯುವ ಕಾರಣ ಹತ್ತು ಜನ ಮಾಡುವ ಕೆಲಸಕ್ಕೆ ಇಬ್ಬರು […]

ಪ್ರಶ್ನೆ: ಅಮ್ಮಾ, ಈಶ್ವರನು* ಒಬ್ಬನೇ ಎಂದಾದರೆ ಯಾಕಾಗಿ ಅವನನ್ನು ಶಿವ, ವಿಷ್ಣು ಎಂದಿತ್ಯಾದಿಯಾಗಿ ಪೂಜಿಸುತ್ತಾರೆ ? “ಮಕ್ಕಳೇ, ನಟನು ಎಷ್ಟೋ ವೇಷಗಳನ್ನು ಹಾಕುತ್ತಾನೆ. ಆದರೆ ಅವನಲ್ಲಿ ಏನೊಂದು ವ್ಯತ್ಯಾಸವೂ ಇಲ್ಲ. ಈಶ್ವರನೂ ಅದೇ ಪ್ರಕಾರ. ವಿವಿಧ ರೂಪಗಳು, ಅಲಂಕಾರಗಳು, ವೇಷಗಳು, ಹೆಸರುಗಳು – ಆದರೆ ಸತ್ಯ ಒಂದು. ಅದರ ವಿವಿಧ ಭಾಗಗಳು, ಬೇರೆಲ್ಲ. ಮನುಷ್ಯರು ಹಲವು ತರದವರು. ಸ್ವಭಾವಗಳೂ ಹಲವು. ಅವರವರ ಮನಸ್ಸಿಗೆ ಸರಿ ಹೊಂದುವ ರೂಪವನ್ನು ಹಾಗೂ ನಾಮವನ್ನು ಸ್ವೀಕರಿಸಿ ಈಶ್ವರನನ್ನು ಪ್ರಾಪ್ತಿಸುವ ಸಲುವಾಗಿ ಋಷಿಶ್ರೇಷ್ಠರು […]