Category / ಅಮ್ಮನ ಸಂದೇಶ

ಇಂದು ಭಾರತ ಹಲವು ಕ್ಷೇತ್ರಗಳಲ್ಲಿ ಸಾಧಿಸುತ್ತಿರುವ ಅಭಿವೃದ್ಧಿಯನ್ನು ಕಂಡು ಭರವಸೆ ಮೂಡುತ್ತಿದೆ. ಆರ್ಥಿಕ ಬೆಳವಣಿಗೆಯಲ್ಲಿಯೂ ಹಾಗು ವಿಜ್ಞಾನದಲ್ಲಿಯ ಪ್ರಗತಿಯಲ್ಲಿಯೂ ನಾವು ಬಹಳ ಮುಂದುವರಿಯುತ್ತಿದ್ದೇವೆ. ಮಂಗಳಯಾನ ಉಪಗ್ರಹದ ವಿಜಯವು ಇಡೀ ಲೋಕದ ಮನ್ನಣೆಯನ್ನು ನಮಗೆ ಗಳಿಸಿಕೊಟ್ಟಿದೆ. ಹಾಗಿದ್ದರೂ ಸಹ, ಭಾರತದಲ್ಲಿನ ಪ್ರತಿಯೊಂದು ಬಡವರ ಜೀವನದಲ್ಲಿಯೂಕೂಡ ಮಂಗಳವು ಸಂಭವಿಸುವಾಗ ಮಾತ್ರವೇ  ನಮ್ಮಯ ಅಭಿವೃದ್ಧಿಗಳೆಲ್ಲವೂ ನಿಜವಾದ ಅರ್ಥವನ್ನು ಮತ್ತು ಪೂರ್ಣತೆಯನ್ನು ಹೊಂದುವುದು.ಕಳೆದ ಎರಡು ವರ್ಷಗಳಿಂದ ಆಶ್ರಮವು ಭಾರತದಾದ್ಯಂತ ನೂರಾರು ಗ್ರಾಮಗಳನ್ನು ದತ್ತುಪಡೆದು ಅಲ್ಲಿ ಸೇವಾಕಾರ್ಯಗಳನ್ನು ನಡೆಸುತ್ತಿದೆ. ಹಲವು ಗ್ರಾಮಗಳ ಸ್ಥಿತಿಯನ್ನು ಕಾಣುವಾಗ […]

ಮೇರೆ ಇಲ್ಲದ, ಭೇದವಿಲ್ಲದ ಅಖಂಡವಾದ ಏಕತ್ವವೇ ಭಗವಂತ. ಆ ಭಗವತ್ದಶಕ್ತಿಯು ಪ್ರಕೃತಿಯಲ್ಲಿ, ಪರಿಸರದಲ್ಲಿ, ಮೃಗಗಳಲ್ಲಿ, ಮನುಷ್ಯರಲ್ಲಿ, ಗಿಡಗಳಲ್ಲಿ, ಮರಗಳಲ್ಲಿ, ಪಕ್ಷಿಗಳಲ್ಲಿ ಪ್ರತಿಯೊಂದು ಕಣಕಣದಲ್ಲಿಯೂ ತುಂಬಿತುಳುಕುತ್ತಿದೆ. ಜಡ ಚೈತನ್ಯಗಳೆಲ್ಲವೂ ಭಗವತ್ದಮಯವಾಗಿದೆ. ಈ ಸತ್ಯವನ್ನು ಅರಿತರೆ ನಮಗೆ ನಮ್ಮನ್ನು, ಇತರರನ್ನು, ಈ ಲೋಕವನ್ನು ಪ್ರೇಮಿಸಲು ಮಾತ್ರವೇ ಸಾಧ್ಯ. ಪ್ರೇಮದ ಮೊದಲ ತರಂಗವು ನಮ್ಮಿಂದಲೇ ಪ್ರಾರಂಭವಾಗಬೇಕು. ನಿಶ್ಚಲವಾಗಿರುವ ಸರೋವರದಲ್ಲಿ ಕಲ್ಲೊಂದನ್ನು ಎಸೆದರೆ, ಮೊದಲ ಪುಟ್ಟ ತರಂಗವು ಆ ಕಲ್ಲಿನ ಸುತ್ತಲು ಪ್ರಕಟವಾಗುತ್ತದೆ. ಕ್ರಮೇಣ ಆ ತರಂಗದ ವೃತ್ತವು ದೊಡ್ಡದಾಗುತ್ತಾ ದೊಡ್ಡದಾಗುತ್ತಾ ಅದು […]

ಪ್ರಪಂಚದಲ್ಲಿ ಯಾವುದೂ ನಿಕೃಷ್ಟವಲ್ಲ. ಒಂದು ವಿಮಾನದ ಎಂಜಿನ್ ಕೆಟ್ಟುಹೋದಲ್ಲಿ ಹಾರಲು ಸಾಧ್ಯವಿಲ್ಲ, ಒಂದು ಸ್ಕ್ರೂ ಇಲ್ಲದ್ದಿದ್ದರೂ ಹಾರಲು ಸಾಧ್ಯವಿಲ್ಲ. ಎಲ್ಲಕ್ಕೂ ಅದರದ್ದೇ ಆದ ಸ್ಥಾನವಿದೆ. ಒಂದೊಂದು ವೃಕ್ಷವನ್ನು ಕತ್ತರಿಸುವಾಗಲೂ ಅದು ನಮಗೆ ಶವಪೆಟಿಗೆಯನ್ನು ನಿರ್ಮಾಣ ಮಾಡುವ ಸಲುವಾಗಿ ವೃಕ್ಷಗಳನ್ನು ಕತ್ತರಿಸುತ್ತಿರುವಂತೆ ಆಗಿಹೋಗುತ್ತಿದೆ.

ಮಕ್ಕಳೇ, ಮುಂದಿನ ಹತ್ತಿರದ ಹೊರೆಗಲ್ಲಿನಲ್ಲಿ,* ಭಾರವನ್ನು ಇಳಿಸಬಹುದೆಂದು ಎಣಿಸಿದಾಗ ನಮ್ಮ ಭಾರ ಕಮ್ಮಿಯಾದಂತನಿಸುತ್ತದೆ; ಭರವಸೆ ಮೂಡುತ್ತದೆ. ಅದು ಬಹಳ ದೂರ ಎಂದು ಭಾವಿಸಿದಾಗ, ಭಾರ ಹೆಚ್ಚಾದಂತನಿಸುತ್ತದೆ. ಭಗವಂತನು ನಮ್ಮ ಹತ್ತಿರವಿದ್ದಾನೆ ಎಂದು ಭಾವಿಸಿರಿ. ಎಲ್ಲಾ ಭಾರವೂ ಕಮ್ಮಿಯಾಗುತ್ತದೆ. ದೋಣಿಯೋ, ಬಸ್ಸೋ ಹತ್ತಿದ ಮೇಲೆ, ಯಾತಕ್ಕೆ ಇನ್ನೂ ಭಾರ ಹೊರಬೇಕು ? ಅದನ್ನು ಅಲ್ಲೇ ಬಿಡಿರಿ. ಇದೇ ರೀತಿ, ದೇವರಿಗೆ ಎಲ್ಲವನ್ನೂ ಸಮರ್ಪಿಸಿರಿ. ಅವನು ನಮ್ಮನ್ನು ಕಾಪಾಡುವನು. * ಹಿಂದಿನಕಾಲದಲ್ಲಿ ಹಳ್ಳಿಗಳಲ್ಲಿ ಬೆನ್ನು ಹೊರೆ ಹಾಗೂ ತಲೆ ಹೊರೆ […]

ಪ್ರಶ್ನೆ: ಜನಗಳ ಸೇವೆ ಮಾಡಲು ತಪಸ್ಸಿನ ಅವಶ್ಯಕತೆಯೇನು ? ಮಕ್ಕಳೇ, ಕಲಿತವನಿಗೆ ಮಾತ್ರವೇ ಇನ್ನುಳಿದವರಿಗೆ ಕಲಿಸಲು ಸಾಧ್ಯ. ಇಂದು ನಮ್ಮ ರಾಗಾದಿ ವೈರಿಗಳು ಯಾವುವೂ ಬಿಟ್ಟು ಹೋಗಿಲ್ಲ. ಯಾರಾದರೂ ದ್ವೇಷಿಸಿದರೆ, ನಾವು ಕಲಿತಿರುವುದು ಅವರನ್ನು ಇಮ್ಮಡಿ ದ್ವೇಷಿಸಲಿಕ್ಕೆ. ಇನ್ನಿತರರ ಒಂದು ಮಾತಿನ ಮೇಲಿದೆ ಇಂದು ನಮ್ಮ ಜೀವನ. ನಮ್ಮ ಬಗ್ಗೆ ಏನಾದರೂ ಹೇಳಿದರು ಎಂದು ಕೇಳಿದರೆ ಸಾಕು, ಒಂದೇ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ, ಇಲ್ಲವೇ ಹೇಳಿದವನನ್ನು ತಿವಿದು ಇರಿಯುತ್ತೇವೆ. ಬೇರೆಯವರ ಬಾಯಿಯ ಎರಡಕ್ಷರಗಳನ್ನು ಹಿಡಿದು ಕೊಂಡು ನಾವಿಂದು […]