Author / amrita

ಏತಕ್ಕಾಗಿ ತಾವು ಓದುತ್ತಿದ್ದೇವೆ ಎನ್ನುವ ಅರಿವಾದರೂ ಇಂದಿನ ಕಿರಿಯರಿಗೆ ಇಲ್ಲ. ಹೇಗಾದರೂ ಒಂದು ಸರ್ಟಿಫಿಕೇಟ್ ಸಂಪಾದಿಸಬೇಕೆಂದಲ್ಲದೆ, ವಿದ್ಯಾಭ್ಯಾಸದಿಂದ ಸರಿಯಾದ ಜ್ಞಾನವನ್ನೋ, ಒಳ್ಳೆ ಸಂಸ್ಕಾರವನ್ನೋ ಪಡೆಯ ಬೇಕೆಂದು ಇವತ್ತಿನ ಯುವಕರಿಗೆ ಇಚ್ಛೆಯಿಲ್ಲ. ಅವರಲ್ಲಿ ಅದನ್ನು ಪ್ರೇರೇಪಿಸಲು ಅಧ್ಯಾಪಕರಿಗೂ ಆಗುವುದಿಲ್ಲ. – ಅಮ್ಮ

ಪ್ರೊಫೆಸರ್‌ಗಳು ಯಂತ್ರದಂತೆ ಕಲಿಸುತ್ತಾರೆ. ಮಕ್ಕಳು ಗೋಡೆಯಂತೆ ಕುಳಿತಿರುತ್ತಾರೆ. ಹೃದಯ ಹೃದಯದೊಂದಿಗಿನ ಸಂವಾದವಿಲ್ಲ. ಅಲ್ಲಿ ಮಕ್ಕಳ ವ್ಯಕ್ತಿತ್ವ ಸರಿಯಾಗಿ ಜಾಗ್ರತವಾಗುವುದಿಲ್ಲ. ಅವರು ಇನ್ನೇನೋ ಆಗಲು ಕಷ್ಟ ಪಡುತ್ತಾರೆ. ಉಡುಪಿಗೆ ಬೇಕಾಗಿ ಶರೀರವನ್ನು ಕತ್ತರಿಸಿದಂತೆ, ಚಪ್ಪಲ್‌ಗೆ ಬೇಕಾಗಿ ಕಾಲು ಕತ್ತರಿಸಿದಂತೆ. – ಅಮ್ಮ

ಹೃದಯವಿಲ್ಲದ ಜೀವನ ಇವತ್ತು ನಾವು ನಡೆಸುತ್ತಿರುವುದು. ಶವಕ್ಕೆಮೇಕಪ್ ಮಾಡಿದ ಹಾಗೆ. ನೌಕರಿಗೆ ಬೇಕಾಗಿ ಜೀವಿಸುತ್ತಿದ್ದೇವೆಯೇ ಹೊರತು ಜೀವಿಸಲಿಕ್ಕೆ ಬೇಕಾಗಿ ನೌಕರಿ ನಾವು ಮಾಡುವುದಲ್ಲ. ನಾವು ಇವತ್ತು ನಡೆಯುತ್ತಿರುವ ಕಂಪ್ಯೂಟರ್‌ನಂತೆ; ನಮ್ಮ ಜೀವನ ಯಾಂತ್ರಿಕವಾಗಿ ಬಿಟ್ಟಿದೆ. – ಅಮ್ಮ

ನಾವೊಂದು ಒಂಟಿ ದ್ವೀಪವಲ್ಲ. ಒಂದೇ ಸರಪಳಿಯ ಕೊಂಡಿಗಳು ನಾವು. ನಾವು ಮಾಡುವ ಒಂದೊಂದು ಕೃತಿಯೂ, ತಿಳಿದೋ ತಿಳಿಯದೆಯೋ ಇತರರ ಮೇಲೆ ಪರಿಣಾಮ ಬೀರುತ್ತದೆ. ಈ ಜಗತ್ತಿನಲ್ಲಿ ನಡೆದಿರುವ ಎಲ್ಲ ಯುದ್ಧಗಳೂ, ಯಾವನೋ ಒಬ್ಬ ಮನುಷ್ಯನೊಳಗೆ ಮೂಡಿದ ವಿದ್ವೇಷದ ಫಲ. ಒಬ್ಬ ವ್ಯಕ್ತಿಯ ಆಲೋಚನೆ, ನಡತೆ ಎಷ್ಟೋ ಜನಗಳನ್ನು ನಾಶ ಮಾಡಿತು. ಹಿಟ್ಲರ್ ಒಬ್ಬ ವ್ಯಕ್ತಿ. ಆದರೆ ಅವನ ಕೃತಿ ಬಾಧಿಸಿದ್ದು ಎಷ್ಟೆಲ್ಲ ಜನರನ್ನು! ನಮ್ಮ ಆಲೋಚನೆ ಇತರರನ್ನೂ, ಇತರರ ಆಲೋಚನೆ ನಮ್ಮನ್ನೂ ಬಾಧಿಸುತ್ತವೆ ಎಂದರಿತು, ಎಂದಿಗೂ ಒಳ್ಳೆಯ […]

ಇವತ್ತಿನ ಮಕ್ಕಳೂ ಯುವಕರೂ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯನ್ನೇ ಕಾಣುತ್ತಿರುವುದು. ನಮ್ಮಲ್ಲಿಲ್ಲದ ಹಲವು ಒಳ್ಳೆಗುಣಗಳು ಅವರಲ್ಲಿ ಕಂಡು ಬರುತ್ತದೆ. ಆದರೆ, ನಮ್ಮ ಮೌಲ್ಯಗಳನ್ನು, ಸಂಸ್ಕೃತಿಯನ್ನು ಪೂರ್ಣವಾಗಿ ಮರೆತು ಪಾಶ್ಚಾತ್ಯ ರೀತಿಗಳ ಅಂಧಾನುಕರಣೆಯೇ ಇವತ್ತು ಕಂಡುಬರುವುದು. ಅದು ಪ್ಲಾಸ್ಟಿಕ್ ಸೇಬು ಕಚ್ಚಿದ ಹಾಗೆ; ಶಿವನು ಬ್ರಹ್ಮನ ವೇಷ ಹಾಕಿದಂತೆ. ಇದರಿಂದ ನಮ್ಮ ನಿಜ ವ್ಯಕ್ತಿತ್ವ ನಾಶವಾಗುತ್ತದೆ. ಆದಕಾರಣ ನಾವು ಬೆಳೆದ ಸಂಸ್ಕೃತಿಗೆ ಮರಳಲು ಪ್ರಯತ್ನಿಸಬೇಕು. ಅದಕ್ಕಾಗಿ ಚಿಕ್ಕ ಮಕ್ಕಳಿಗೆ ಎಳೆಯ ಪ್ರಾಯದಲ್ಲೇ ಈ ಸಂಸ್ಕೃತಿಯ ಭದ್ರ ಬುನಾದಿ ಹಾಕಲು ತಾಯಂದಿರು […]