ದೇವಾಲಯ ಮತ್ತು ಮಸೀದಿಗಳಿಗೆ ಹೋಗಿ ಪೂಜೆ ಸಲ್ಲಿಸಿದ ಮಾತ್ರಕ್ಕೇ ಧರ್ಮಾಚರಣೆ ಆಯಿತೆಂದಲ್ಲ, ಅದು ಪರಿಪೂರ್ಣ ಭಕ್ತಿಯೆಂದೂ ಅರ್ಥವಲ್ಲ. ಎಲ್ಲ ಜೀವಜಾಲಗಳಲ್ಲೂ ಆತ್ಮನನ್ನು, ಭಗವಂತನನ್ನು ಕಾಣಲು ಸಾಧ್ಯವಾಗಬೇಕು. ಅದೇ ನಿಜವಾದ ಭಕ್ತಿ.

ಎಲ್ಲಾ ಚರಾಚರಗಳನ್ನು ಸಂರಕ್ಷಿಸುವುದೇ ಪ್ರಕೃತಿಯ ಏಕೈಕ ಉದ್ದೇಶ. ಈ ವಿಷಯದಲ್ಲಿ ನಮಗೆ ಸಂಪೂರ್ಣ ನಂಬಿಕೆ ಇರಬೇಕು. ಏನನ್ನೂ ಹಾನಿ ಮಾಡದೆ ಬದುಕಲು, ಶಾಂತಿಯುತ ಮಾರ್ಗಗಳನ್ನು ನಾವು ಕಂಡುಕೊಳ್ಳಬೇಕು. ಸ್ವಂತ ಏಳಿಗೆಗಾಗಿ ಇತರರನ್ನು ನಾಶಪಡಿಸಲು ನಾವು ಮುಂದಾಗಬಾರದು.
ಇದು 21ನೇ ಶತಮಾನ. ಈ ಮಹಾಧಾರ್ಮಿಕ ಸಮ್ಮೇಳನದ ಯಶಸ್ಸಿಗಾಗಿ ಅವಿರತವಾಗಿ ಶ್ರಮಿಸಿದ ಸನ್ಯಾಸಿ ಶ್ರೇಷ್ಠರು, ಆಧ್ಯಾತ್ಮಿಕ ನೇತಾರರು ಮತ್ತು ಹಿಂದೂ ಸ್ವಾಗತ ಸಮಿತಿಯವರು, ಒಟ್ಟಾಗಿ ಈ ದೃಢ ಪ್ರತಿಜ್ಞೆ ಮಾಡಬಹುದು:
‘ದೇಶ ಮತ್ತು ಕಾಲವನ್ನು ಮೀರಿ, ಇಡೀ ಜಗತ್ತಿಗೆ ಶಾಂತಿ ಮತ್ತು ಸಾಮರಸ್ಯ ತರಲು ಮತ್ತು ಮಾನವಕುಲದ ತೊಂದರೆಗಳಿಗೆ ಸಮಾಧಾನ ನೀಡಲು ನಾವು ಶ್ರಮಿಸುತ್ತೇವೆ. ಸನಾತನ ಧರ್ಮದ ಮಹಾನ್ ಆದರ್ಶ ಅನುಷ್ಠಾನವಾಗಲಿ.’
ಪರಮ ತತ್ವ ಮತ್ತು ಜೀವನದ ಉನ್ನತ ಆದರ್ಶಗಳನ್ನು ಎಲ್ಲಾ ಯುವಕ-ಯುವತಿಯರಿಗೆ ನೀಡಲು ನಾವು ದೃಢ ಸಂಕಲ್ಪ ಮಾಡಬಹುದು. ಅವರು ಭವಿಷ್ಯದ ಅರಳುವ ಹೂವಿನ ಮೊಗ್ಗುಗಳು; ಅರಳಿ ಜಗತ್ತಿನ ಪರಿಮಳವಾಗಬೇಕಾದವರು!

Download Amma App and stay connected to Amma