ದೇಶದಲ್ಲಿ ಸಮಾಜಕ್ಕೆ ವಿಪತ್ತಾಗಿ ಪರಿಣಮಿಸಿರುವ ಮಾಲಿನ್ಯಕ್ಕೆ ವಿರುದ್ಧವಾಗಿ ಯುವಕರ ಹೊಸ ಯೋಜನೆ ಅಮ್ಮನ 57ನೇ ಜನ್ಮದಿನೋತ್ಸವದ ವೇದಿಕೆಯಿಂದ ಆರಂಭವಾಯಿತು. ಪರಿಸರ ಶುಚೀಕರಣ ತಮ್ಮ ಕರ್ತವ್ಯ ಎಂಬ ದೃಢ ಪ್ರತಿಜ್ಞೆಯನ್ನು ಅಮ್ಮನ ಮಕ್ಕಳು ಮಾಡಿದರು. “ನಿರ್ಮಲ ಭಾರತವು ಅಮೃತ ಭಾರತ” ಎನ್ನುವ ಅಮ್ಮನ ಘೋಷಣೆ ತಮ್ಮ ಜೀವನದ ವ್ರತ ಎಂದಾಗಿದೆ ಆ ಪ್ರತಿಜ್ಞೆ.
ಪ್ರತಿಜ್ಞೆ
ಭೂಮಿಯು ನನ್ನ ತಾಯಿ. ಶುಚಿತ್ವ ಪ್ರಜ್ಞೆಯು ದೈವತ್ವದ ಪ್ರಜ್ಞೆಯೇ ಆಗಿದೆಯೆಂಬ ಅರಿವಿನೊಂದಿಗೆ – ನನ್ನ ಜೀವನದ ಮುಂಬರುವ ದಿನಗಳಲ್ಲಿ ಪರಿಸರ ನೈರ್ಮಲ್ಯದ್ದೂ, ಶುಚಿತ್ವದ್ದೂ, ಸಾಮಾಜಿಕ ಅನಿವಾರ್ಯತೆಯನ್ನು ಅರ್ಥ ಮಾಡಿಕೊಳ್ಳುವುದು – ಅದನ್ನು ವಿಚಾರದಲ್ಲೂ ಕಾರ್ಯದಲ್ಲೂ ಅನ್ವಯಗೊಳಿಸುವುದೂ, ಎಂದೆಂದೂ ಪಾಲಿಸುವುದೂ ಆಗಿರುವುದು. “ನಿರ್ಮಲ ಭಾರತವು ಅಮೃತ ಭಾರತ” ಎನ್ನುವ ಶ್ರೀ ಮಾತಾ ಅಮೃತಾನಂದಮಯಿ ದೇವಿಯ ಬೋಧನೆಯನ್ನು ನಾನು ನನ್ನ ಜೀವನದ ದಾರಿದೀಪವಾಗಿ ಪರಿಗಣಿಸುತ್ತೇನೆ.
ಮಠದ ಈ ಹೊಸ ಯೋಜನೆಗೆ ರೋಟರಿ ಕ್ಲಬ್ಬುಗಳ ಬೆಂಬಲವನ್ನು ರೋಟರಿ ಡಿಸ್ಟ್ರಿಕ್ಟ್ನ ಹಿಂದಿನ ಗವರ್ನರ್ ವೇಣುಗೋಪಾಲ್ ಸಿ. ಗೋವಿಂದ್ರವರು ಘೋಷಿಸಿದರು.

Download Amma App and stay connected to Amma