ಪರಿಸ್ಥಿತಿಗಳೊಂದಿಗೆ ಹೊಂದಿಕೊಳ್ಳಲು ನಮ್ಮ ಹೃದಯದಲ್ಲಿ ಶಾಂತಿ ಇರಬೇಕು.

ಇದು ಆಧ್ಯಾತ್ಮಿಕತೆಯನ್ನು ಅರ್ಥಮಾಡಿಕೊಳ್ಳುವುದರ ಮೂಲಕ ಮಾತ್ರ ಸಾಧ್ಯ. ಈ ವಿಧಾನದಲ್ಲಿಶಾಂತವಾದ ಮನಸ್ಸು ಪರಿಸ್ಥಿತಿಗಳೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. ಧ್ಯಾನದಿಂದ ಮಾತ್ರ ನಿಜವಾದ ಶಾಂತಿ ಸಿಗುತ್ತದೆ. ಜೀವನದಲ್ಲಿ ಯಾವುದೇ ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳುವ ಮನಸ್ಸನ್ನು ನಾವು ಬೆಳೆಸಿಕೊಳ್ಳಬೇಕು.
ನಮ್ಮ ಜೀವನ ಕಣ್ಣಿನಂತೆ ಇರಬೇಕು ಎಂದು ಹೇಳುತ್ತಾರೆ. ಏಕೆಂದರೆ, ಕಣ್ಣು ನೋಟದ ಶಕ್ತಿಯನ್ನು ನಿಯಂತ್ರಿಸಬಲ್ಲದು. ಒಂದು ವಸ್ತು ದೂರದಲ್ಲಿದ್ದದರೂ ಅಥವಾ ಹತ್ತಿರದಲ್ಲಿದ್ದರೂ, ಕಣ್ಣು ಅದಕ್ಕೆ ಅನುಗುಣವಾಗಿ ನೋಟವನ್ನು ಹೊಂದಿಸುತ್ತದೆ. ಇದರ ಫಲವಾಗಿಯೇ ನಾವು ಅವುಗಳನ್ನು ನೋಡಲು ಸಾಧ್ಯವಾಗುತ್ತದೆ.
ಸಾಮಾನ್ಯ ಜೀವನ ರಸ್ತೆಯಲ್ಲಿ ವಾಹನ ಓಡಿಸುವಂತಿದ್ದರೆ, ಆಧ್ಯಾತ್ಮಿಕ ಜೀವನ ವಿಮಾನವನ್ನು ಹಾರಿಸುವಂತಿದೆ. ಏಕೆಂದರೆ, ರಸ್ತೆಯಲ್ಲಿ ಓಡುವ ವಾಹನಗಳು ನೆಲದ ಮೇಲೆ ಮಾತ್ರ ಸಾಗಬಲ್ಲವು, ಸ್ವಲ್ಪವೂ ಮೇಲಕ್ಕೆ ಹೋಗಲು ಸಾಧ್ಯವಿಲ್ಲ.
ಆದರೆ, ವಿಮಾನ ಅದಕ್ಕೆ ವ್ಯತಿರಿಕ್ತವಾಗಿದೆ. ರಸ್ತೆಯಲ್ಲಿ ಓಡಿ ಮೇಲಕ್ಕೆ ಏರುವುದು. ಉನ್ನತ ಸ್ಥಾನಗಳಿಗೆ ಹೋದಾಗ, ಎಲ್ಲವನ್ನೂ ಸಾಕ್ಷಿಯಾಗಿ ವೀಕ್ಷಿಸುವ ಶಕ್ತಿ ನಮಗೆ ಸಿಗುತ್ತದೆ. ನಾವೆಲ್ಲರೂ ಈಗ ಆದೇಶವನ್ನು ಅನುಸರಿಸುವ ಯಂತ್ರದಂತೆ ಆಗಿದ್ದೇವೆ. ಅದು ಬೇಕಾಗಿಲ್ಲ. ವಿವೇಕ ಮತ್ತು ಜಾಗೃತಿಯುಳ್ಳ ಮನುಷ್ಯನಾಗಿ ಮಾರ್ಪಡಾಗಬೇಕು.