ಪ್ರಶ್ನೆ: ಅಮ್ಮಾ, ಧ್ಯಾನದಿಂದ ಏಳಬೇಕಾದರೆ ಗಮನಿಸಬೇಕಾದ ಅಂಶಗಳು ಯಾವುವು ?
“ಮಕ್ಕಳೇ, ಧ್ಯಾನ ಮುಗಿದ ಕೂಡಲೇ ತಟ್ಟನೆ ಎದ್ದೇಳುವುದೋ, ಮಾತನಾಡುವುದೋ ಮಾಡಬಾರದು. ಸ್ವಲ್ಪ ಸಮಯ ಶವಾಸನದಲ್ಲಿರುವುದು ಒಳ್ಳೆಯದು. ಆಗ ನಿದ್ದೆ ಬರದಂತೆ ವಿಶೇಷ ಜಾಗ್ರತೆ ವಹಿಸಬೇಕು. ಇಂಜೆಕ್ಷನ್ ಚುಚ್ಚಿದ ಮೇಲೆ ಡಾಕ್ಟರು ಸ್ವಲ್ಪ ಸಮಯ ರೆಸ್ಟ್ ತೆಗೆದುಕೊಳ್ಳಲಿಕ್ಕೆ ಹೇಳುವುದಿಲ್ಲವೇ ? ಅದೇ ತರ ಧ್ಯಾನಾನಂತರ ಏಕಾಂತ ಅವಶ್ಯ. ಸಾಧನೆ ಮಾಡುವಾಗಲ್ಲ; ಅದರ ನಂತರವೇ ಅದರ ಪರಿಣಾಮ ದೊರಕುವುದು.”

ಪ್ರಶ್ನೆ: ಅಮ್ಮಾ, ಎಷ್ಟು ಧ್ಯಾನ ಮಾಡಿಯೂ, ಬಾಹ್ಯ ವಸ್ತುಗಳ ಆಕರ್ಷಣೆ ಇಲ್ಲದಾಗುವುದಿಲ್ಲವಲ್ಲ ?
“ಮಕ್ಕಳೇ, ನಿಮ್ಮಲ್ಲಿ ಭಗವಂತನ ಪ್ರತಿಯಾಗಿ ಸಂಪೂರ್ಣವಾದ ಪ್ರೇಮ ಇದ್ದಲ್ಲಿ, ಪೂರ್ತಿಯಾಗಿ ಮಕ್ಕಳಿಗೆ ವಿಷಯ ವಸ್ತುಗಳು ಅಸಹ್ಯವಾಗಿ ತೋರುವುದು. ಜ್ವರ ಹಿಡಿದು ರೋಗಿಯಾಗಿ ಮಲಗಿರುವ ವ್ಯಕ್ತಿಗೆ, ಸಿಹಿ ಫಲಾಹಾರ ಕೊಟ್ಟರೂ ಅದು ಅವನಿಗೆ ಕಹಿಯೆನಿಸುವುದು. ಹಾಗೆಯೇ, ನಮಗೆ ಭಗವಂತನ ಪ್ರೇಮದ ಜ್ವರ ಬರಬೇಕು. ಆಗ ಬಾಹ್ಯವಸ್ತುಗಳಲ್ಲಿ ಆಕರ್ಷಣೆ ಅನಿಸುವುದಿಲ್ಲ. ನಾಲಿಗೆಯ ರುಚಿ ತ್ಯಜಿಸದೆ ಹೃದಯದ ರುಚಿ ಅರಿಯಲು ಸಾಧ್ಯವಾಗುವುದಿಲ್ಲ.”

ಪ್ರಶ್ನೆ: ಅಮ್ಮಾ, ಬಹಳ ಕಾಲದ ಸಾಧನೆ ಮಾಡಿಯೂ ಅದರ ಪರಿಣಾಮ ಅರಿತುಕೊಳ್ಳಲು ಸಾಧ್ಯವಾಗುತ್ತಿಲ್ಲ.
“ಮಕ್ಕಳೇ, ನಾವು ಧ್ಯಾನ ಮಾಡುತ್ತೇವೆ. ತಟ್ಟನೆ ಎದ್ದು ಲೌಕಿಕ ವಿಚಾರ ಮಾತನಾಡಲಿಕ್ಕೆ ತೊಡಗುತ್ತೇವೆ. ಅದು ದಿನವೆಲ್ಲ ಕೆಲಸ ಮಾಡಿ ಸಿಕ್ಕಿದ ಹಣವನ್ನು, ಪೂರ್ತಿ ಹೆಂಡ ಕುಡಿದು ಕಳೆದುಕೊಂಡಹಾಗೆ. ಎಣ್ಣೆ ಹಚ್ಚಿ ತಕ್ಷಣ ಸ್ನಾನ ಮಾಡಿದರೆ ಅದು ಮೈಗೆ ಹಿಡಿಯುವುದಿಲ್ಲವಲ್ಲ ? ಧ್ಯಾನಾನಂತರ ಹತ್ತು ಮಿನಿಟಾದರೂ ಏಕಾಂತತೆ ಸಿಗಬೇಕು. ಅಂದರೆ ಮಾತ್ರವೇ ನಮಗೆ ಅದರ ಪ್ರಯೋಜನ ಲಭಿಸುವುದು. ಹಾಗೆ ಮಾಡದಿರುವ ಕಾರಣ ನಮಗೆ ಅದರ ರುಚಿ ನಮಗೆ ಗೊತ್ತಾಗದೆ ಹೋಗುತ್ತದೆ. ಪಾಯಸದ ಜೊತೆ ಅನ್ನ ಹಾಗೂ ಪಲ್ಯ ಕಲೆಸಿ ತಿಂದರೆ ಪಾಯಸದ ರುಚಿ ಗೊತ್ತಾಗುವುದಿಲ್ಲ. ಆದರೆ ಪಾಯಸ ಅದರ ಒಟ್ಟಿಗೆಯೇ ಇತ್ತಲ್ಲವೇ ? ಮಕ್ಕಳು ಲೌಕಿಕ ಕೆಲಸ ಮಾಡುವವರಲ್ಲವೇ ? ಮನಸ್ಸಿನಲ್ಲಿ ಹೆಚ್ಚಾಗಿ ಪ್ರಾಪಂಚಿಕ ವಿಷಯಗಳೇ ತುಂಬಿ ಕೊಂಡಿರುವ ಕಾರಣ ಸಾಧನೆಯ ಮಹತ್ವ ನಮಗೆ ತಿಳಿಯಲು ಸಾಧ್ಯವಾಗದೆ ಹೋಗುತ್ತದೆ. ಆದರೆ ಅದರ ಪರಿಣಾಮ ಮಕ್ಕಳಲ್ಲಿ ಇದ್ದೇ ಇರುತ್ತದೆ. ಶ್ರದ್ಧೆಯಿಂದ ಸಾಧನೆ ಮಾಡಿದರೆ ಸಾಕು.”

ಪ್ರಶ್ನೆ: ದೇವರು ಎಲ್ಲಾ ಕಡೆ ಇರುವುದಾದರೆ ಯಾಕಾಗಿ ಮಹಾತ್ಮರನ್ನು ಸಂದರ್ಶಿಸಬೇಕು ?
ಮಕ್ಕಳೇ, ಎಲ್ಲಾ ಕಡೆ ಗಾಳಿ ಇದೆ. ಆದರೆ ಬಿಸಿಲಲ್ಲಿದ್ದು ಮರದ ಕೆಳಗೆ ಬಂದು ಮುಟ್ಟಿದ ವ್ಯಕ್ತಿಗೆ, ಎಲೆಗಳಿಂದ ಹಾದು ಬಂದ ಗಾಳಿ ವಿಶೇಷ ತಂಪನ್ನೀಯುದಿಲ್ಲವೇ ? ಇದೇಥರ ಒಬ್ಬ ಮಹಾತ್ಮನ ಬಳಿ ಹೋದಾಗ ವಿಶೇಷ ಶಾಂತಿಯ ಅನುಭವವಾಗುತ್ತದೆ. ಮಕ್ಕಳು ಹೇಳಬಹುದು ಅದಕ್ಕೆ ಬಿಡುವಿಲ್ಲವೆಂದು. ಒಂದು ಹೆಜ್ಜೆ ಭೂಮಿಗಾಗಿ ನಾವು ಎಷ್ಟು ವರ್ಷ ಬೇಕಾದರೂ ಕೋರ್ಟಿನ ಜಗಲಿಯಲ್ಲಿ ಕುಕ್ಕುರುಗಾಲಲ್ಲಿ ಕೂತಿರುವುತ್ತೇವೆ. ಮಳೆಯಾಗಲಿ, ಬಿಸಿಲಾಗಲಿ, ಇತರ ಅಡಚಣೆಗಳಾಗಲಿ ಯಾವುದನ್ನೂ ಗಣಿಸುವುದಿಲ್ಲ. ಭೂಮಿ ಗಳಿಸುವ ಆಸೆ ಅಷ್ಟಿರುವ ಕಾರಣ ಕೇಸು ಹಾಕಲು ಸಮಯ ಹೊಂದಿಸುತ್ತೇವೆ; ಅನಾನುಕೂಲತೆಗಳನ್ನು ಸ್ವೀಕರಿಸುತ್ತೇವೆ. ಅದಕ್ಕೆ ಯಾರೂ ಆಕ್ಷೇಪ ಎತ್ತುವುದಿಲ್ಲ.

ನೆಚ್ಚಿನ ಮಕ್ಕಳೇ, ನಮಗೇನಾದರೂ ರೋಗ ಬಂದಾಗ ಡಾಕ್ಟರರ ಹತ್ತಿರ ಹೋಗುತ್ತೇವೆ. ಆದರೆ ರೋಗವೇ ಬರದಹಾಗೆ ಈ ಪರಿಸರದಲ್ಲಿ ಹೇಗೆ ಜೀವಿಬೇಕೆನ್ನುವುದರ ಬಗ್ಗೆ ಯಾರೂ ಚಿಂತಿಸುವುದಿಲ್ಲ. ಕೋಟಿಯಲ್ಲಿ ಒಬ್ಬರು ಮಾತ್ರ ಆ ತರಹ ಚಿಂತಿಸಬಹುದು. ಮಕ್ಕಳೇ ಎಚ್ಚರದಿಂದ ಜೀವನ ಸಾಗಿಸಿದರೆ, ದುಃಖವಿಲ್ಲದೆ ಬಾಳಬಹುದು.